ಬೆಂಗಳೂರು:
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2024 ರ ಪ್ರಶಸ್ತಿಗೆ ಹಾಸನ ಜಿಲ್ಲೆಯ ಕುಮಾರಿ ಎ. ಚಾರ್ವಿ ಭಾಜನರಾಗಿದ್ದಾಳೆ.
ಕಾಮನ್ವೆಲ್ತ್ ಹಾಗೂ ಏಷ್ಯನ್ ಯೂತ್ ಚೆಸ್ ಕ್ರೀಡೆಯಲ್ಲಿ ಬಾಲ ಚಾಂಪಿಯನ್ ಆಗಿದ್ದ ಚಾರ್ವಿಯ ಸಾಧನೆಯ ಕಿರೀಟಕ್ಕೆ ಈಗ ಬಾಲ ಪುರಸ್ಕಾರ ದೊರೆತಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರಳಾಗಿ ನಾಡಿನ ಕೀರ್ತಿ ಹೆಚ್ಚಿರುವ ಚಾರ್ವಿ ಅವರಿಗೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿನಂದಿಸಿದ್ದಾರೆ.