More

    ಆಟವಾಡುತ್ತಿದ್ದ ಮಕ್ಕಳು ನೀರು ಪಾಲು

    ಯರಗಟ್ಟಿ: ಸಮೀಪದ ಕಟಕೋಳ ರಸ್ತೆ ಜಮೀನಿನ ಪಕ್ಕದಲಿರುವ ಕರ್ಣ ಹಳ್ಳದ ದಂಡೆಯಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

    ಸತೀಶ ಬಸಪ್ಪ ದುರಗಣ್ಣರ (8), ಸಂಜೀತಾ ಗೋಪಾಲ ದುರಗಣ್ಣವರ (6) ಮೃತಪಟ್ಟ ಮಕ್ಕಳು. ವೀರೇಶ ಬಸಪ್ಪ ದುರಗಣ್ಣವರ (10) ನಾರಾಯಣ ಗೋಪಾಲ ದುರಗಣ್ಣವರ (10) ತೀವ್ರ ಅಸ್ವಸ್ಥಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸವದತ್ತಿ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆ ಸುರಿದಿತ್ತು. ಕಟಕೋಳ ರಸ್ತೆಯ ಹೊಲದಲ್ಲಿ ವಾಸವಿದ್ದ ದುರಗಣ್ಣವರ ಕುಟುಂಬದ ಮಕ್ಕಳು ಆಟವಾಡುತ್ತ ಹಳ್ಳದ ದಂಡೆಗೆ ಹೋಗಿದ್ದಾರೆ. ಮಳೆಯಾಗಿದ್ದರಿಂದ ಹಳ್ಳದಲ್ಲಿ ನೀರು ನಿಂತಿತ್ತು.

    ಮೊದಲು ಸತೀಶ ಎಂಬ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಸಂಜೀತಾ ಎಂಬ ಪುಟ್ಟ ಬಾಲಕಿ ನೀರಿಗಿಳಿದು ಅವನನ್ನು ಹಿಡಿಯಲು ಹೋಗಿ ತಾನೂ ಮುಳಗಿದ್ದಾಳೆ. ಹೀಗೆ ಅವರ ಹಿಂದೆ ಮತಿಬ್ಬರು ಬಾಲಕರು ನೀರಿನಲ್ಲಿ ಮುಳಗಿದ್ದಾರೆ.

    ಬಹಳ ಹೊತ್ತಿನವರೆಗೆ ಕಾಣದ ಮಕ್ಕಳನ್ನು ಹುಡಕಲು ಬಂದ ತಂದೆ ಗೋಪಾಲ ಅವರಿಗೆ ನೀರಿನಲ್ಲಿ ಮಕ್ಕಳು ಮುಳುಗಿರುವುದು ಕಂಡು ಬಂದಿದೆ. ತಕ್ಷಣ ಎಲ್ಲ ಮಕ್ಕಳನ್ನೂ ಹೊರ ತೆಗೆದು, ನಂತರ ಸಮೀಪದ ಯರಗಟ್ಟಿ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ನಾಲ್ಕೂ ಮಕ್ಕಳು ಗೋಪಾಲ ಮತ್ತು ಬಸಪ್ಪ ಎಂಬ ಸಹೋದರರ ಮಕ್ಕಳಾಗಿದ್ದಾರೆ. ಈ ಕುರಿತು ಮುರಗೊಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts