More

    ಪಿಜ್ಜಾ ತಗೊಂಡ್ರು… ಹಣ ಕೇಳಿದ್ದಕ್ಕೆ ಡೆಲಿವರಿ ಬಾಯ್​ಗೆ ಕಲ್ಲಿನಿಂದ ಹೊಡೆದು ಓಡಿಹೋದ್ರು

    ಬೆಂಗಳೂರು: ಆನ್​ಲೈನ್​ನಲ್ಲಿ ಪಿಜ್ಜಾ ಆರ್ಡರ್​ ಮಾಡಿದ್ದ ದುಷ್ಕರ್ಮಿಗಳು ಡೆಲಿವರಿ ಬಾಯ್​ಗೆ ಹಣ ಕೊಡದೇ ಕಲ್ಲಿನಿಂದ ಹಲ್ಲೆ ನಡೆಸಿ ಪಿಜ್ಜಾ ಸಮೇತ ಪರಾರಿಯಾಗಿದ್ದಾರೆ.

    ಜು.28ರಂದು 10 ಗಂಟೆಗೆ ಭರತ್​ ಎಂಬುವವರು ಆನ್​ಲೈನ್​ನಲ್ಲಿ ಮೂರು ಪಿಜ್ಜಾ ಆರ್ಡರ್​ ಮಾಡಿದ್ದರು. 10.30ಕ್ಕೆ ಡೆಲಿವರಿ ಬಾಯ್​ ಹೇಮಂತ್​ ಪಿಜ್ಜಾ ಕೊಡಲು ಬಾಣಸವಾಡಿಯ ಮುನೇಶ್ವರ ದೇವಾಲಯದ ಬಳಿ ಬಂದಿದ್ದರು. ಅಲ್ಲಿಗೆ ಬಂದ ಭರತ್​ ಹಾಗೂ ಇತರರು ಪಿಜ್ಜಾ ತೆಗೆದುಕೊಂಡು ಹಣ ಕೊಡದೇ ಹೋಗಲು ಮುಂದಾದರು. ಹೇಮಂತ್​ ಹಣ ಕೇಳಿದಾಗ ಆರೋಪಿಗಳು ರಸ್ತೆಯಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಇದನ್ನೂ ಓದಿರಿ ಕುಖ್ಯಾತ ಬೈಕ್​ ಕಳ್ಳನ ಸೆರೆ, ಕದ್ದ ವಾಹನಗಳ ಮಾರಾಟ ವಿಧಾನ ಕೇಳಿದ್ರೆ ಶಾಕ್​ ಆಗ್ತೀರಿ

    ಪಿಜ್ಜಾದ ಹಣ ಕೊಡದೆ ಹಲ್ಲೆ ಮಾಡಿ ಪರಾರಿಯಾದ ಭರತ್​ ಮತ್ತು ಇತರರ ವಿರುದ್ಧ ಮಹದೇವಪುರ ನಿವಾಸಿ ಹೇಮಂತ್,​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆರೋಪಿಗಳು ಆನ್​ಲೈನ್​ನಲ್ಲಿ ಪಿಜ್ಜಾ ತರಿಸಿಕೊಂಡು ಹಲವು ಜನರಿಗೆ ವಂಚನೆ ಮಾಡಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ.

    ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts