ಬೆಂಗಳೂರು: ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದ ದುಷ್ಕರ್ಮಿಗಳು ಡೆಲಿವರಿ ಬಾಯ್ಗೆ ಹಣ ಕೊಡದೇ ಕಲ್ಲಿನಿಂದ ಹಲ್ಲೆ ನಡೆಸಿ ಪಿಜ್ಜಾ ಸಮೇತ ಪರಾರಿಯಾಗಿದ್ದಾರೆ.
ಜು.28ರಂದು 10 ಗಂಟೆಗೆ ಭರತ್ ಎಂಬುವವರು ಆನ್ಲೈನ್ನಲ್ಲಿ ಮೂರು ಪಿಜ್ಜಾ ಆರ್ಡರ್ ಮಾಡಿದ್ದರು. 10.30ಕ್ಕೆ ಡೆಲಿವರಿ ಬಾಯ್ ಹೇಮಂತ್ ಪಿಜ್ಜಾ ಕೊಡಲು ಬಾಣಸವಾಡಿಯ ಮುನೇಶ್ವರ ದೇವಾಲಯದ ಬಳಿ ಬಂದಿದ್ದರು. ಅಲ್ಲಿಗೆ ಬಂದ ಭರತ್ ಹಾಗೂ ಇತರರು ಪಿಜ್ಜಾ ತೆಗೆದುಕೊಂಡು ಹಣ ಕೊಡದೇ ಹೋಗಲು ಮುಂದಾದರು. ಹೇಮಂತ್ ಹಣ ಕೇಳಿದಾಗ ಆರೋಪಿಗಳು ರಸ್ತೆಯಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿರಿ ಕುಖ್ಯಾತ ಬೈಕ್ ಕಳ್ಳನ ಸೆರೆ, ಕದ್ದ ವಾಹನಗಳ ಮಾರಾಟ ವಿಧಾನ ಕೇಳಿದ್ರೆ ಶಾಕ್ ಆಗ್ತೀರಿ
ಪಿಜ್ಜಾದ ಹಣ ಕೊಡದೆ ಹಲ್ಲೆ ಮಾಡಿ ಪರಾರಿಯಾದ ಭರತ್ ಮತ್ತು ಇತರರ ವಿರುದ್ಧ ಮಹದೇವಪುರ ನಿವಾಸಿ ಹೇಮಂತ್, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿಗಳು ಆನ್ಲೈನ್ನಲ್ಲಿ ಪಿಜ್ಜಾ ತರಿಸಿಕೊಂಡು ಹಲವು ಜನರಿಗೆ ವಂಚನೆ ಮಾಡಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಹಳೇ ಲವ್ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!