More

    ದೇವರ ದರ್ಶನ ಮುಗಿಸಿ ಮರಳುತ್ತಿದ್ದ 19 ಸಿಖ್ ಯಾತ್ರಾರ್ಥಿಗಳು ಅಪಘಾತದಲ್ಲಿ ದಾರುಣ ಸಾವು

    ಚಂಡೀಗಢ: ಪಂಜಾಬ್‌ನ ಶೇಖುಪುರ ಜಿಲ್ಲೆಯಲ್ಲಿ ಶುಕ್ರವಾರ ಸಂಚರಿಸುತ್ತಿದ್ದ ಬಸ್ ರೈಲು ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಅಂದಾಜು 19 ಸಿಖ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
    ಫಾರೂಕಾಬಾದ್ ರೈಲ್ವೆ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ರೈಲು ಕರಾಚಿಯಿಂದ ಲಾಹೋರ್‌ನತ್ತ ತೆರಳುತ್ತಿದ್ದಾಗ ಬಸ್ ಅಲ್ಲಿ ನುಗ್ಗಿತು. ಯಾವುದೇ ಬ್ಯಾರಿಯರ್​​​ ಗಳಿಲ್ಲದ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಮಾಧ್ಯಮ ವರದಿಗಳ ಪ್ರಕಾರ, ಸಿಖ್ ಯಾತ್ರಾರ್ಥಿಗಳು ನಮ್​​ಕನಾ ಸಾಹಿಬ್‌ ಧಾರ್ಮಿಕ ಸ್ಥಳದಿಂದ ಹಿಂದಿರುಗುತ್ತಿದ್ದರು.

    ಆ.15ಕ್ಕೆ ಬಿಡುಗಡೆ ಸಜ್ಜಾಗುತ್ತಿರುವ ಕೊವ್ಯಾಕ್ಸಿನ್​ ಬಗ್ಗೆ ಭಾರತ್​ ಬಯೋಟೆಕ್​ ಸಿಎಂಡಿ ಏನು ಹೇಳುತ್ತಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts