ಮಂಗಳೂರು: ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಈ ಮಳೆಯಿಂದಾಗಿ ಬೆಳ್ತಂಗಡಿಯ ಮೃತ್ಯುಂಜಯ ನದಿ ನೀರು ಹೆಚ್ಚಾಗಿದ್ದು, ಪಿಕಪ್ ವಾಹನವೊಂದು ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದಾಗಿ ಗಾಡಿಯ ಡ್ರೈವರ್ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಚಿಬಿದ್ರೆಯಲ್ಲಿ ಹರಿಯುವ ಮೃತ್ಯುಂಜಯ ನದಿ ಮೈದುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ಅದರ ಅರಿವಿರದೆ ಸದಾನಂದ ಎಂಬುವವರಿಗೆ ಸೇರಿದ ಪಿಕಪ್ ವಾಹನವನ್ನು ನೀರಿಗಿಳಿಸಲಾಗಿದ್ದು, ಗಾಡಿ ನೀರಿನಲ್ಲಿ ಮುಳುಗಲಾರಂಭಿಸಿತ್ತು. ಅಲ್ಲೇ ಹತ್ತಿರದಲ್ಲಿದ್ದ ಜನರು ಅದನ್ನು ಗಮನಿಸಿದ್ದು, ವಾಹವನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆ. ಸ್ಥಳೀಯರು ಸೂಕ್ತ ಸಮಯಕ್ಕೆ ಸಹಾಯಕ್ಕೆ ಬಂದಿದ್ದರಿಂದಾಗಿ ಗಾಡಿಯಲ್ಲಿದ್ದ ಡ್ರೈವರ್ ಮತ್ತು ಕ್ಲೀನರ್ನನ್ನು ಬದುಕುಳಿಸಿಕೊಳ್ಳಲಾಗಿದೆ.
ವಿಶಾಖಪಟ್ಟಣಂನ ಎಚ್ಪಿಸಿಎಲ್ ಸ್ಥಾವರದಲ್ಲಿ ಹೊತ್ತಿ ಉರಿದ ಬೆಂಕಿ! ತಪ್ಪಿತು ದೊಡ್ಡ ಅನಾಹುತ..
ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ