ಬೆಂಗಳೂರು: ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡು ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ರಂಜನಿ ರಾವನ್, ಇದೀಗ ಮೈಸೂರು ಮಹಾರಾಣಿಯಾಗಿದ್ದಾರೆ! ಹಾಗಂತ ಸಿನಿಮಾ ಅಥವಾ ಕಿರುತೆರೆಯಲ್ಲಿ ಅಂಥ ಪಾತ್ರ ಮಾಡುತ್ತಿಲ್ಲ. ಬದಲಿಗೆ ಮೈಸೂರು ಮಹಾರಾಣಿ ಕೆಂಪ ನಂಜಮ್ಮಣ್ಣಿ ಅವರ ಗೌರವಾರ್ಥ ವಿಶೇಷ ೋಟೋ ಶೂಟ್ ಮಾಡಿಸಿದ್ದಾರೆ.
ಜುಲೈ 7, ಮಹಾರಾಣಿ ಕೆಂಪ ನಂಜಮ್ಮಣ್ಣಿ ಅವರ ಪುಣ್ಯಸ್ಮರಣೆ. ಆ ದಿನದ ಪ್ರಯುಕ್ತ ಮೈಸೂರಿನ ರಾಣಿಯರು ತೊಡುತ್ತಿದ್ದ ಸೀರೆ ಮತ್ತು ಆಭರಣದ ಶೈಲಿಯಲ್ಲಿಯೇ ರಂಜನಿ ೋಟೋ ಶೂಟ್ ಮಾಡಿಸಿದ್ದಾರೆ. ಈ ಬಗ್ಗೆ ಹೇಳಿಕೊಳ್ಳುವ ಅವರು, “ಕಳೆದ ಎರಡು ವರ್ಷದಿಂದ ನಾನು ೋಟೋಶೂಟ್ ಮಾಡಿಸಿಲ್ಲ. ಸುಮ್ಮನೇ ಮಾಡಿಸುವ ಬದಲು ಒಂದೊಳ್ಳೆಯ ಉದ್ದೇಶದ ಹಿನ್ನೆಲೆಯನ್ನು ಪ್ರಧಾನವಾಗಿಸಿ ೋಟೋ ತೆಗೆಸಿದರಾಯಿತು ಎಂಬ ಆಲೋಚನೆ ಇತ್ತು. ಆಗ ಹೊಳೆದದ್ದೇ ಈ ಕಾನ್ಸೆಪ್ಟ್. ಕೆಂಪ ನಂಜಮ್ಮಣ್ಣಿ ಅವರು ಆಗಿನ ಕಾಲದಲ್ಲಿ ತಮ್ಮ ಚಿನ್ನಾಭರಣಗಳನ್ನು ಮಾರಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಅವರ ಆ ಸೇವೆಯ ಗೌರವಾರ್ಥವಾಗಿ ಮೈಸೂರಿನ ರಾಣಿಯರ ಸೀರೆಯ ವೈಭವವನ್ನು ಈ ೋಟೋ ಶೂಟ್ ಮೂಲಕ ತೋರಿಸಿದ್ದೇವೆ. ಮೈಸೂರು ಸಿಲ್ಕ್, ಡಾಬು, ಆಭರಣ … ಹೀಗೆ ಆಗಿನ ಹೋಲಿಕೆಯನ್ನೇ ೋಟೋದಲ್ಲಿ ಕಾಣಬಹುದು’ ಎಂಬುದು ಅವರ ಮಾತು. ಇನ್ನು, ಮಹಾರಾಣಿಯ ಲುಕ್ನಲ್ಲಿ ಕಾಣಿಸಿಕೊಂಡಿರುವ ರಂಜನಿಗೆ ತೆರೆಮೇಲೆ ಐತಿಹಾಸಿಕ ಪಾತ್ರ ನಿರ್ವಹಿಸುವುದಕ್ಕೂ ಇಷ್ಟವಂತೆ. ಅವಕಾಶ ಸಿಕ್ಕರೆ ಪಾತ್ರಕ್ಕೆ ಜೀವ ತುಂಬುವುದಾಗಿ ಹೇಳಿದ್ದಾರೆ.
ಸಿನಿಮಾ ಬಗ್ಗೆ ಹೇಳುವುದಾದರೆ, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಹೊಸ ಕಥೆಗಳನ್ನೂ ಕೇಳುತ್ತಿದ್ದಾರೆ. “ಕನ್ನಡತಿ’ ಧಾರಾವಾಹಿಯಲ್ಲಿಯೂ ಬಿಜಿಯಾಗಿದ್ದಾರೆ.