ಬೆಂಗಳೂರು: ಇಲ್ಲೊಬ್ಬ ಒಂದು ನರಿಯ ಕಾರಣಕ್ಕೆ ಜೈಲುಪಾಲಾಗಿದ್ದಾನೆ. ಅರ್ಥಾತ್, ಕೋಳಿ ಫಾರಮ್ನಲ್ಲಿ ನರಿಯನ್ನು ಪಂಜರದಲ್ಲಿ ಇರಿಸಿಕೊಂಡಿದ್ದವನನ್ನು ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮೀಕಾಂತ (42) ಬಂಧಿತ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನರಿಯನ್ನು ಕೋರ್ಟ್ ಅನುಮತಿ ಪಡೆದು ಕಾಡಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು
ಏಳು ತಿಂಗಳ ಹಿಂದೆ ಕಾಡಿನಲ್ಲಿ ನರಿ ಮರಿಯನ್ನು ಹಿಡಿದುಕೊಂಡು ಬಂದು ಲಕ್ಷ್ಮೀಕಾಂತ್, ತನ್ನ ಕೋಳಿ ಫಾರಮ್ನಲ್ಲಿ ಪಂಜರದಲ್ಲಿ ಬಂಧಿಸಿಟ್ಟಿದ್ದ. ವನ್ಯಜೀವಿಯಾದ ನರಿಯನ್ನು ಬಂಧಿಸಿಡುವುದು ಅಪರಾಧ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕೋಳಿಫಾರಮ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!
ಕೊಲೆಯಾದ ರೂಪದರ್ಶಿಯ ಕಾಲು ಫ್ರಿಡ್ಜ್ನಲ್ಲಿತ್ತು!; ರುಂಡಕ್ಕಾಗಿ ಪೊಲೀಸರ ಹುಡುಕಾಟ