ಮೈಸೂರು: ಗುಂಬಜ್ ಒಡೆದು ಹಾಕ್ತೀನಿ ಅನ್ನೋಕೆ ಪ್ರತಾಪ್ ಸಿಂಹ ಯಾವನ್ ರೀ? ಸಂಸದನಾಗಿ ಕಾಮನ್ಸೆನ್ಸ್ ಬೇಡ್ವಾ? ಅವರು ಮನೆಯ ಹಣ ಹಾಕಿ ಪ್ರಯಾಣಿಕರ ತಂಗುದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಸಂಸದ ಏನು ಮಾಡ್ತಿದ್ರು? ಈಗ ತಾನೇ ಒಡೆದು ಹಾಕ್ತೀನಿ ಅಂದ್ರೆ ಏನ್ ಅರ್ಥ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಮೈಸೂರು ನಗರದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದ ಛಾವಣಿ ಮೇಲೆ ಗುಂಬಜ್ ಮಾದರಿ ನಿರ್ಮಿಸಲಾಗಿದೆ. ಇದನ್ನು ತೆರವು ಮಾಡಬೇಕು. ಇಲ್ಲವಾದರೆ ಜೆಸಿಬಿ ತೆಗೆದುಕೊಂಡು ಹೋಗಿ ನಾನೇ ಒಡೆದು ಹಾಕುವೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 600 ವರ್ಷಗಳ ಹಿಂದೆಯೇ ಮೊಘಲರು ನಮ್ಮ ದೇಶವನ್ನ ಆಳುವಾಗ ಇವರೆಲ್ಲ ಏನು ಮಾಡ್ತಿದ್ರು? ಅಶಾಂತಿ ನಿರ್ಮಾಣ ಮಾಡಲು ಪ್ರತಾಪ್ ಸಿಂಹ ಈ ರೀತಿ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಚುನಾವಣೆ ಸಂದರ್ಭದಲ್ಲಿ ಮತ ಕ್ರೂಡೀಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹೀಗೇ ಇರಬೇಕು ಎಂಬ ರೂಲ್ಸ್ ಎಲ್ಲಿದೆ? ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್ ಪ್ರಕಾರ ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಿದೆ. ಗುಂಬಜ್ ರೀತಿ ಇರುವುದನೆಲ್ಲಾ ಒಡೆದು ಬಿಡ್ತೀರಾ? ಬಿಜೆಪಿಯ ಈ ತಂತ್ರ ವರ್ಕ್ ಆಗಲ್ಲ. ಕರ್ನಾಟಕ ಮತ್ತು ಈ ದೇಶದ ಜನರು ಜ್ಯಾತ್ಯತೀತರು. ಜಾತಿ-ಧರ್ಮದ ವಿಚಾರವನ್ನ ಜನರು ಒಪ್ಪುವುದಿಲ್ಲ ಎಂದರು.
ಜೆಡಿಎಸ್ಗೆ ಕುಣಿಗಲ್ ಮಾಜಿ ಶಾಸಕ ಎಚ್.ನಿಂಗಪ್ಪ ರಾಜೀನಾಮೆ! ಕಾಂಗ್ರೆಸ್ನಿಂದ ಸ್ಪರ್ಧೆ