ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹಲವು ದಿನಗಳಿಂದ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಮನೆಗಳಿಂದ ಹೊರಬಂದು ಶೆಡ್ಗಳನ್ನು ಹಾಕಿಕೊಂಡು ಭಯದಲ್ಲಿ ಬದುಕುತ್ತಿದ್ದಾರೆ. ಮತ್ತೊಂದು ಕಡೆ ಭಾರೀ ಮಳೆ ಆಗ್ತಾ ಇದೆ. ಕೆರೆತೊರೆಗಳು ತುಂಬಿ ಹರಿಯುತ್ತಿವೆ. ಈ ಸಂದರ್ಭದಲ್ಲಿ ಭೂಕಂಪ ಏಕೆ ಆಗುತ್ತೆ? ಅದರ ಪರಿಣಾಮಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಈ ನಿಟ್ಟಿನಲ್ಲಿ ಏನು ಜನರು ಮಾಡಬಹುದು ಎಂಬ ಬಗ್ಗೆ ವಿಜಯವಾಣಿ ಕ್ಲಬ್ಹೌಸ್ನಲ್ಲಿ ತಜ್ಞರೊಂದಿಗೆ ಸಂವಾದ ನಡೆಯುತ್ತಿದೆ.
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ಎಚ್.ಎಚ್.ಎಂ.ಪ್ರಕಾಶ್ ಮತ್ತು ಬೆಂಗಳೂರು ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಬಿ.ಸಿ.ಪ್ರಭಾಕರ್ ಭೂಕಂಪ ಬಗೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಭೂಕಂಪದ ಕಾರಣ, ಪರಿಣಾಮ, ಮುನ್ನೆಚ್ಚರಿಕೆ ಮುಂತಾಗಿ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ ನೀವೂ ಭಾಗವಹಿಸಿ.
https://www.clubhouse.com/join/vijayavani/0pMTxucr/m227pOv9
ಐಪಿಎಲ್ 2021 ಗೆದ್ದ ಸಿಎಸ್ಕೆ, ಇತರ ತಂಡಗಳಿಗೆ ಸಿಕ್ಕ ಬಹುಮಾನದ ಹಣ ಎಷ್ಟು ಗೊತ್ತಾ?
ರಾಮಮಂದಿರಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ ಮೊದಲು ಹೇಳಿ: ಲೆಕ್ಕ ಕೇಳಿದ ಎಚ್ಡಿಕೆಗೆ ಸಿ.ಟಿ.ರವಿ ಪ್ರಶ್ನೆ