ಚಿಕ್ಕಮಗಳೂರು: ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧ ದಂಪತಿ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.
ಗೋಪಾಲಕೃಷ್ಣ (74), ರತ್ನಾ (73) ಮೃತ ದಂಪತಿ. ಇವರಿಬ್ಬರೂ ಡೆತ್ ನೋಟ್ ಬರೆದಿದ್ದಾರೆ. ಗೋಪಾಲಕೃಷ್ಣ ಅವರು ನೇಣು ಹಾಕಿಕೊಂಡಿದ್ದು, ತಾಯಿ ರತ್ನಾ ಅವರು ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಮಕ್ಕಳ ವರ್ತನೆಯಿಂದ ತೀವ್ರವಾಗಿ ನೊಂದು ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಇನ್ನು2-3 ದಿನಗಳಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮಹಾರಾಷ್ಟ್ರ…! ದಾಖಲೆ ಬರೆಯುವತ್ತ ಸಾಗಿದೆ ಈ ರಾಜ್ಯ