ಪರಶುರಾಮಪುರ: ಅಪಾಯಕಾರಿ ವೈರಾಣು ಹರಡುವಿಕೆ ತೀವ್ರವಾಗಿದ್ದು, ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ಹೇಳಿದರು.
ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್, ಶಿಶು ಅಭಿವೃದ್ಧಿ ಇಲಾಖೆಯಿಂದ ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಸದಸ್ಯ ಆರ್.ಟಿ.ನಿಂಗಣ್ಣ, ದೊಡ್ಡರಂಗಪ್ಪ, ಪಿಡಿಒ ತ್ರಿವೇಣಿ, ಆಡಳಿತ ವೈದ್ಯಾಧಿಕಾರಿ ಹಿಮಬಿಂಧು, ವೈದ್ಯರಾದ ಚಂದ್ರಶೇಖರ, ನಂಜುಂಡಪ್ಪ, ಎಎನ್ಎಂ ಕವಿತಾ ಇದ್ದರು.