ವಿಶ್ವಾದ್ಯಂತ ಕರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ: 4 ಪ್ರಮುಖ ಕಾರಣ ತಿಳಿಸಿದ ಡಬ್ಲ್ಯುಎಚ್​ಒ ವಿಜ್ಞಾನಿ

blank

ನವದೆಹಲಿ: ಡೆಲ್ಟಾ ವೈರಸ್​ ರೂಪಾಂತರ ಹರಡುವಿಕೆ ಮತ್ತು ಲಸಿಕಾ ಅಭಿಯಾನದ ಮಂದಗತಿಯಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕರೊನಾ ವೈರಸ್​ ಸಾಂಕ್ರಮಿಕ ಇನ್ನು ಕಡಿಮೆಯಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ)ಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬ್ಲೂಂಬರ್ಗ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಒಟ್ಟು ಆರು ಡಬ್ಲ್ಯುಎಚ್‌ಒ ಪ್ರದೇಶಗಳ ಐದರಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಆಫ್ರಿಕಾದಲ್ಲಿ ಕಳೆದ ಎರಡು ವಾರಗಳಲ್ಲಿ ಶೇ. 30 ರಿಂದ 40 ರಷ್ಟು ಮರಣ ಪ್ರಮಾಣ ಜಿಗಿತ ಕಂಡಿದೆ ಎಂದು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಜಗತ್ತಿನಾದ್ಯಂತ 5 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. 9,300 ಮಂದಿ ಮೃತಪಟ್ಟಿದ್ದಾರೆ. ಕೋವಿಡ್​ ಇನ್ನು ಕಡಿಮೆಯಾಗಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಹೇಳಿದರು.

ನಿರಂತರ ಕರೊನಾ ಹರಡುವಿಕೆಗೆ ನಾಲ್ಕು ಕಾರಣಗಳನ್ನು ಪಟ್ಟಿ ಮಾಡಿದ ಸ್ವಾಮಿನಾಥನ್​, ಡೆಲ್ಟಾ ರೂಪಾಂತರಿ, ಸಾಮಾಜಿಕ ಪಾಲ್ಗೊಳ್ಳುವಿಕೆ, ಲಾಕ್​ಡೌನ್​ ಸಡಿಲಿಕೆ ಮತ್ತು ಲಸಿಕಾ ಅಭಿಯಾನದ ಮಂದಗತಿಯೇ ಕಾರಣ ಎಂದರು.

ವೇಗವಾಗಿ ಹರಡುವ ಡೆಲ್ಟಾ ರೂಪಾಂತರವು ಕೋವಿಡ್ -19ರ ಅತ್ಯಂತ ಅಪಾಯಕಾರಿ ರೂಪಾಂತರವಾಗಿದೆ ಮತ್ತು ಇದು ಸೋಂಕುಗಳ ಉಲ್ಬಣಕ್ಕೆ ಮುಖ್ಯ ಕಾರಣವಾಗಿದೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಮೂಲ ವೈರಸ್‌ನಿಂದ ಸೋಂಕಿತ ವ್ಯಕ್ತಿಯು ಮೂರು ಜನರಿಗೆ ಸೋಂಕು ತಗುಲಿದರೆ, ಡೆಲ್ಟಾ ರೂಪಾಂತರದಿಂದ ಸೋಂಕಿತ ವ್ಯಕ್ತಿಯು 8 ಜನರಿಗೆ ಸೋಂಕು ತಗುಲಿಸಬಹುದು ಎಂದು ಹೇಳಿದರು.

ಜನರು ಮನೆಗಳಿಂದ ಹೊರಹೋಗುತ್ತಿದ್ದು, ಸಾಮಾಜಿಕವಾಗಿ ಪಾಲ್ಗೊಳ್ಳುತ್ತಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು. ಇದಲ್ಲದೆ, ವಿಶ್ವದ ಅನೇಕ ದೇಶಗಳು ಮತ್ತು ಆ ದೇಶಗಳಲ್ಲಿನ ಪ್ರದೇಶಗಳು ನಿರ್ಬಂಧಗಳನ್ನು ಸಡಿಲಗೊಳಿಸಿವೆ. ಸಾಮಾಜಿಕ ಅಂತರದಂತಹ ಸುರಕ್ಷತಾ ಕ್ರಮಗಳಿಗೆ ವಿಶ್ರಾಂತಿ ಘೋಷಿಸುವುದರಿಂದ ಅಪಾಯ ತೆರೆದುಕೊಂಡಿದೆ ಎಂದು ಹೇಳಿದರು.

ಮತ್ತೊಂದು ಸಂದರ್ಶನದಲ್ಲಿ, ಸ್ವಾಮಿನಾಥನ್, ಕೊವಾಕ್ಸಿನ್‌ನ 3ನೇ ಹಂತದ ದತ್ತಾಂಶವು ಭರವಸೆಯಂತೆ ಕಾಣುತ್ತದೆ ಮತ್ತು ಈ ಲಸಿಕೆಯನ್ನು ಡಬ್ಲ್ಯುಎಚ್‌ಒ ಆಗಸ್ಟ್ ಅಂತ್ಯದವರೆಗೆ ಅನುಮೋದಿಸಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಯುವತಿಯರು: ವೈರಲ್​ ಆಯ್ತು ವಿಡಿಯೋ!

ವಿವಾಹಿತೆಯನ್ನು ಮರುಮದ್ವೆಯಾದವನ ಕಣ್ಣು ಆಕೆಯ ಮಗಳ ಮೇಲೆ ಬಿತ್ತು: ಮುಂದಾಗಿದ್ದು ಊಹಿಸದ ಘಟನೆ!

ರಾಕ್​ಲೈನ್ ವೆಂಕಟೇಶ್ ಮನೆಗೆ ಜೆಡಿಎಸ್ ಬೆಂಬಲಿಗರ ಮುತ್ತಿಗೆ ಯತ್ನ, ಸುಮಲತಾ ಮನೆಗೂ ಬಂದೋಬಸ್ತ್​

Share This Article

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…