ಸದಾ ಭಾರತದ ವಿರುದ್ಧ ಅಸಮಾಧಾನ ಹೊರಹಾಕುತ್ತ, ಗೊಡ್ಡು ಬೆದರಿಕೆಗಳನ್ನೊ ಒಡ್ಡುತ್ತ, ಹೇಡಿಯಂತೆ ಉಪಟಳ ಕೊಡುವ ಪಾಕಿಸ್ತಾನ ಇದೀಗ ಮತ್ತೆ ನ್ಯೂಕ್ಲಿಯರ್ ಬಾಂಬ್ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ನಾವು ಭಾರತದ ಮೇಲೆ ನ್ಯೂಕ್ಲಿಯರ್ ದಾಳಿ ಮಾಡುತ್ತೇವೆ. ಮುಸ್ಲಿಮರ ಜೀವ ಉಳಿಸಲು, ನಾವು ಭಾರತದ ನಿರ್ಧಿಷ್ಟ ಪ್ರದೇಶಗಳ ಮೇಲೆ ಅಸ್ತ್ರ ಪ್ರಯೋಗ ಮಾಡುತ್ತೇವೆ ಎಂದು ಪಾಕ್ ಹೇಳಿದೆ.
ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಗಳನ್ನು ನೀಡಿ, ಸುದ್ದಿಯಾಗುವ ಪಾಕ್ ಸಚಿವ ಶೇಖ್ ರಶೀದ್ ಆಗಸ್ಟ್ 19ರಂದು ಪಾಕ್ ನ್ಯೂಸ್ ಚಾನಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ನಮ್ಮ ಶಸ್ತ್ರಾಸ್ತ್ರ ಸಣ್ಣದಾಗಿದೆ, ಆದರೆ ಸಮರ್ಥವಾಗಿದೆ. ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಗುರಿಯಾಗಿಸಿ ನ್ಯೂಕ್ಲಿಯರ್ ದಾಳಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜಧಾನಿಯಲ್ಲಿ ಒಂದು ಲಕ್ಷಕ್ಕೆ ತಲುಪಿದ ಸೋಂಕಿತರ ಸಂಖ್ಯೆ; ನಿನ್ನೆ ರಾಜ್ಯಾದ್ಯಂತ 7,385 ಜನರಿಗೆ ಕೋವಿಡ್
ಒಮ್ಮೆ ಭಾರತವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಸಾಂಪ್ರದಾಯಿಕ ಯುದ್ಧವನ್ನು ಯಾವ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ಪ್ರತಿಕ್ರಿಯೆ ನ್ಯೂಕ್ಲಿಯರ್ ದಾಳಿಯಾಗಿರುತ್ತದೆ ಮತ್ತು ಇದು ರಕ್ತಸಿಕ್ತ ಯುದ್ಧವಾಗಿರುತ್ತದೆ. ಅಲ್ಲಿಗೆ ಎಲ್ಲವೂ ಕೊನೆಯಾಗುತ್ತದೆ ಎಂದು ಶೇಖ್ ರಶೀದ್ ಎಚ್ಚರಿಸಿದ್ದಾರೆ.
ಪಾಕಿಸ್ತಾನ ನ್ಯೂಕ್ಲಿಯರ್ ದಾಳಿಯ ಗೊಡ್ಡು ಬೆದರಿಕೆ ಒಡ್ಡುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. 2019ರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಲವು ಬಾರಿ ಈ ಪ್ರಸ್ತಾಪ ಮಾಡಿದ್ದರು. (ಏಜೆನ್ಸೀಸ್)
ಅಜ್ಜಿಗೆ ಮೋಸ ಮಾಡಲಿಲ್ಲ ಭೂತಾಯಿ; 20 ವರ್ಷಗಳ ನಂತರ ಕಿವಿಯೋಲೆಯನ್ನು ವಿಭಿನ್ನವಾಗಿ ವಾಪಸ್ ಕೊಟ್ಟಳು