ನವದೆಹಲಿ: ಪಾಕಿಸ್ತಾನದ ಕರಾಚಿಯಲ್ಲಿರುವ ಸ್ಟಾಕ್ ಎಕ್ಸ್ಚೇಂಜ್ ಮೇಲಿನ ಉಗ್ರದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪ ಮಾಡಿರುವ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಟುವಾಗಿ ಉತ್ತರ ನೀಡಿದೆ. ನಿಮ್ಮ ದೇಶದೊಳಗೆ ಇರುವ ಸಮಸ್ಯೆಗಳಿಗೆ ಭಾರತದತ್ತ ಬೊಟ್ಟು ಮಾಡಬೇಡಿ ಎಂದು ಖಡಕ್ ಪ್ರತಿಕ್ರಿಯೆ ನೀಡಿದೆ.
ಕರಾಚಿಯ ಷೇರುಪೇಟೆ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾಹ್ ಮಹಮ್ಮದ್ ಖುರೇಶಿ ಭಾರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ದಾಳಿಯ ಹಿಂದೆ ಭಾರತದ ಪಿತೂರಿ ಇದೆ ಎಂದು ಹೇಳಿದ್ದರು.
ಪಾಕ್ನ ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ಇಲಾಖೆ, ಖುರೇಶಿ ಅವರು ತಮ್ಮ ಸರ್ಕಾರ ಮಾಡುವುದನ್ನು ಇಲ್ಲಿಯೂ ಅನ್ವಯಿಸಿ ಹೇಳಿದ್ದಾರೆ. ಅವರ ಪ್ರಧಾನಿ ಇಮ್ರಾನ್ ಖಾನ್ ಅವರು ಜಾಗತಿಕ ಉಗ್ರನನ್ನು ಹುತಾತ್ಮ ಎನ್ನುತ್ತಾರೆ. ಅದೇ ರೀತಿಯ ಮನಸ್ಥಿತಿಯಲ್ಲಿಯೇ ಇದೀಗ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದೆ.
ಕರಾಚಿ ಪಿಎಸ್ಎಕ್ಷ್ ಮೇಲೆ ಸೋಮವಾರ ಬೆಳಗ್ಗೆ ನಾಲ್ವರು ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಉಗ್ರರೂ ಸೇರಿ ಒಟ್ಟು 9 ಮಂದಿ ಮೃತರಾಗಿದ್ದರು. (ಏಜೆನ್ಸೀಸ್)
ಸಿಡಿಲು ಬಡಿತಕ್ಕೆ ಇಂದು ಒಂದೇ ದಿನ 22 ಮಂದಿ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ