ಪಟನಾ: ಬಿಹಾರದ ಹಲವು ಭಾಗಗಳಲ್ಲಿ ಇಂದು ಸಿಡಿಲು ಬಡಿದು ಒಟ್ಟು 22 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ದಳ ಮಾಹಿತಿ ನೀಡಿದೆ.
ಪಟನಾ, ಪೂರ್ವ ಚಂಪಾರನ್, ಸಮಸ್ತಿಪುರ, ಪೂರ್ವ ಚಂಪಾರಣ್, ಶಿಯೋಹರ್, ಕಠಿಹಾರ್, ಮಾಧೆಪುರ ಮತ್ತು ಪೂರ್ಣಿಯಾಗಳಲ್ಲಿ ತೀವ್ರ ಸಿಡಿಲು ಬಡಿದಿದ್ದು, ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಬಿಹಾರದಲ್ಲಿ ಕಳೆದ ಒಂದು ವಾರದಿಂದ ಒಟ್ಟು 92 ಮಂದಿ ಸಿಡಿಲು ಬಡಿತಕ್ಕೆ ಬಲಿಯಾಗಿದ್ದಾರೆ.
VIDEO: ತನಗೆ ಕೊವಿಡ್-19 ಇದೆ ಎಂದು ಗೊತ್ತಾಗುತ್ತಿದ್ದಂತೆ ತುದಿಗಾಲಿನಲ್ಲಿ ಕುಳಿತು ಹುಚ್ಚಿಯಂತೆ ಕೂಗಾಡಿದ ಯುವತಿ…