More

    ಗೃಹ ಸಚಿವ ಅಮಿತ್​ ಷಾ ಭೇಟಿ ಸಂದರ್ಭದಲ್ಲೇ ಪಾಕ್​ ವಿಜಯೋತ್ಸವ!

    ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್​ ಷಾರ ಭೇಟಿಯ ಸಮಯದಲ್ಲೇ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಟಿ20 ವರ್ಲ್ಡ್​ ಕಪ್​ ಕ್ರಿಕೆಟ್​ ವಿಜಯವನ್ನು ಆಚರಿಸಲಾಗಿದೆ. ಭಾರತ ವಿರೋಧಿ ಘೋಷಣೆಗಳನ್ನು ಹಾಕಲಾಗಿದೆ ಎಂದು ಮಹಾರಾಷ್ಟ್ರದ ಶಿವ ಸೇನಾ ಸಂಸದ ಸಂಜಯ್​ ರಾವತ್ ಹೇಳಿದ್ದಾರೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ‘ವಿರಾಟ್​ ಕೊಹ್ಲಿಯ ಭಾರತ ತಂಡದ ವಿರುದ್ಧ ಪಾಕ್​ ತಂಡ ಗೆದ್ದುದಕ್ಕೆ ಸಂಭ್ರಮಾಚರಣೆ’ ಎಂದು ಯುವಕರು ಪಟಾಕಿಗಳನ್ನು ಸಿಡಿಸುತ್ತಿರುವ ವಿಡಿಯೋ ಒಂದನ್ನು ಟ್ವೀಟ್​ ಮಾಡಿರುವ ರಾವತ್​, “ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾಶ್ಮೀರದಲ್ಲೇ ಇರುವ ಸಮಯದಲ್ಲಿ ಟಿ20ಯಲ್ಲಿ ಪಾಕಿಸ್ತಾನಿ ತಂಡದ ಗೆಲುವು ಹಾಗೂ ಭಾರತದ ಸೋಲಿನ ಈ ರೀತಿಯಾದ ಸಂಭ್ರಮಾಚರಣೆ ಮಾಡಿದರೆ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರೆ, ಅದು ಖಂಡಿತವಾಗಿಯೂ ಚಿಂತೆಯ ವಿಷಯವಾಗಿದೆ. ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಬರೆದಿದ್ದಾರೆ. ಅವರ ಈ ಟ್ವೀಟ್​ನ ಕೊನೆಯಲ್ಲಿ ಜೈ ಹಿಂದ್​! ವಂದೇ ಮಾತರಂ! ಎಂದು ರಾಷ್ಟ್ರಭಕ್ತಿಯ ಘೋಷವಾಕ್ಯಗಳನ್ನೂ ನಮೂದಿಸಿದ್ದಾರೆ. (ಏಜೆನ್ಸೀಸ್)

    ಶಾಲೆಯ ಮೊದಲ ದಿನ ವಿದ್ಯಾರ್ಥಿಯನ್ನು ಸ್ವಾಗತಿಸಿದ ನಾಗಪ್ಪ!

    ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts