More

    ಪಾದಯಾತ್ರೆಯೊಂದಿಗೆ ರಕ್ತದಾನ ಜಾಗೃತಿ, ಸಾಸ್ತಾನದಿಂದ ತಿರುಪತಿಗೆ ಹೊರಟ ಯುವಕರ ತಂಡ

    ಕೋಟ: ಬಾಂಧವ್ಯ ಬ್ಲಡ್ ಕರ್ನಾಟಕ ಸಂಸ್ಥೆಯ ಸಂಸ್ಥಾಪಕ ದಿನೇಶ್ ಬಾಂಧವ್ಯ ಅವರ ನೇತೃತ್ವದ ನೂರಕ್ಕೂ ಅಧಿಕ ಮಂದಿಯ ತಂಡ ಸೋಮವಾರ ತಿರುಪತಿ ಪಾದಯಾತ್ರೆ ಹೊರಟಿದ್ದು, ಈ ಯಾತ್ರೆಯಲ್ಲಿ ಡೊನೆಟ್ ಬ್ಲೆಡ್ ಸೇವ್ ಲೈಫ್ ಎನ್ನುವ ಪತಾಕೆಯನ್ನು ಹಿಡಿದು ಪ್ರತಿದಿನ 40ರಿಂದ 45 ಕಿ.ಮೀ. ಕ್ರಮಿಸಲಿದ್ದಾರೆ.

    ಪಾದಯಾತ್ರೆ ಸಾಸ್ತಾನದಿಂದ ಕೊಂಡಾಡಿ, ಹೊಸ್ಮಾರ್, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಶೆಟ್ಟಿಹಳ್ಳಿ, ಕುಣಿಗಲ್ ಯಡಿಯೂರು, ಶಿವಗಂಗೆ, ರಾಜಘಟ್ಟ, ಕೈವಾರ, ರಾಯಲ್ಪಾಡು, ವಾಯಲ್ಪಾಡು ಪಿಲೇರು, ಬಾಕ್ರ ಪೇಟೆ, ಶ್ರೀನಿವಾಸ, ಮಂಗಾಪುರ, ಶ್ರೀವಾರಿ ಮೆಟ್ಟಿಲಿನಿಂದ ಸೆ. 29ರಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ.
    ದಿನೇಶ್ ಬಾಂಧವ್ಯ ಈಗಾಗಲೇ 41 ಬಾರಿ ರಕ್ತದಾನ ಮಾಡಿದ್ದು, ಇವರಿಗೆ ಪಾದಯಾತ್ರೆ ರೂವಾರಿ ಲಕ್ಷ್ಮೀನಾರಾಯಣ್ ರಾವ್ ಮತ್ತು ಶ್ರೀಧರ್ ಪಿಎಸ್ ಪತಾಕೆ ದಿನೇಶ್ ಬಾಂಧವ್ಯ ಅವರಿಗೆ ನೀಡುವ ಮೂಲಕ ಚಾಲನೆ ನೀಡಿದರು. ಯೋಗೀಶ್ ದೇವಾಡಿಗ ವಿಜಯ್ ಕುಮಾರ್, ಸಂತೋಷ್ ಕಾಂಚನ್, ಅಶೋಕ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts