ಬೆಂಗಳೂರು: ಕಳೆದ ರಾತ್ರಿ ಕರಾವಳಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ. ಕೋಸ್ಟಲ್ ಪ್ರದೇಶ ಸೇರಿದಂತೆ ಉತ್ತರ ಒಳನಾಡಿನಲ್ಲೂ ಅಧಿಕ ಮಳೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪ್ರೀತಿಸಿ ಕೈಕೊಟ್ಟ ಯುವಕ: ಪಾಲಕರಿಗೆ ತಿಳಿಸದೇ 1 ವಾರ ನೋವಿನಿಂದಲೇ ನರಳಿ ಪ್ರಾಣ ಬಿಟ್ಟ ಯುವತಿ
ಕೆಎಸ್ಎನ್ಡಿಎಂಸಿ ಪ್ರಕಾರ, ಶನಿವಾರ ರಾತ್ರಿ (ಜುಲೈ 22) ಉಡುಪಿ ಜಿಲ್ಲೆಯ ನೀರೆಯಲ್ಲಿ 351 ಮಿ.ಮೀ ಮಳೆಯಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕೂಡ ಭಾರೀ ಮಳೆಯನ್ನು ಕಂಡಿವೆ. ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಶನಿವಾರ ರಾತ್ರಿ 250 ಮಿ.ಮೀ ಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ ಕರಾವಳಿ ಪ್ರದೇಶಗಳಿಗೆ ಇದೀಗ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಜೋರು ಮಳೆಯ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).
ಟಾಲಿವುಡ್ ನಟಿಯರ ಹಿನ್ನಡೆಗೆ ಸ್ಟೈಲೀಶ್ ಸ್ಟಾರ್ ಬೇಸರ; ಶ್ರೀಲೀಲಾ ಕೈಯಲ್ಲಿವೆ ಬರೋಬ್ಬರಿ 10 ಚಿತ್ರಗಳು!