More

    ಬಿಬಿಎಂಪಿ ಕಾರ್ಪೊರೇಟರ್ ಒಬ್ಬರ ಪತಿ ಅರೆಸ್ಟ್- ಆತನ ಮಾಡಿದ್ದೇನು ಗೊತ್ತೆ?

    ಯಲಹಂಕ: ಸಾಮಾಜಿಕ ಜಾಲತಾಣದಲ್ಲಿ ಅಮಾಯಕ ವ್ಯಕ್ತಿಯೊಬ್ಬನಿಗೆ ಕರೊನಾ ಸೋಂಕಿದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಪಾಲಿಕೆ ಸದಸ್ಯೆಯ ಪತಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

    ಬಿಬಿಎಂಪಿಯ ಚೌಡೇಶ್ವರಿ ವಾರ್ಡ್-2ರ ಕಾಪೋರೇಟರ್ ಪದ್ಮಾವತಿ ಅವರ ಪತಿ ಯಲಹಂಕ ನಗರಸಭೆ ಮಾಜಿ ಸದಸ್ಯ ಅಮರ್​ನಾಥ್ ಬಂಧಿತ. ಯಲಹಂಕದಲ್ಲಿ ನೆಲೆಸಿರುವ ವ್ಯಕ್ತಿಗೆ ಕರೊನಾ ಸೋಂಕು ಇದೆ ಎಂದು ಅಮರನಾಥ್ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ.

    ಕೊಂಡಪ್ಪ ಲೇಔಟ್​ನಲ್ಲಿ ಮೊದಲ ಕರೊನಾ ಪಾಸಿಟಿವ್ ಕೇಸ್ ಎಂದು ತೆಲುಗಿನಲ್ಲಿ ಸುಳ್ಳು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ. ಈ ಸುಳ್ಳು ವದಂತಿಯಿಂದಾಗಿ ಆಂಧ್ರ ಹಾಗೂ ತೆಲಂಗಾಣದ ಕೂಲಿ ಕಾರ್ವಿುಕರು ಭಯಭೀತರಾಗಿ ಊರಿಗೆ ಹೋಗಲು ತಂಡೋಪತಂಡವಾಗಿ ಕೋಗಿಲು ಕ್ರಾಸ್ ಬಸ್ ನಿಲ್ದಾಣದ ಬಳಿ ಬಂದಿರುವುದನ್ನು ಕಂಡ ಪೊಲೀಸರು ವಿಚಾರಿಸಿದಾಗ ಅಮರನಾಥನ ಸುಳ್ಳು ಸುದ್ದಿಯ ವಿಚಾರ ಬಯಲಾಗಿದೆ.

    ಏರ್​ಗನ್​ನಿಂದ ನಾಯಿಗಳ ಮೇಲೆ ದಾಳಿ ನಡೆಸಿದ ಮಹಿಳೆ: ಪ್ರಕರಣ ದಾಖಲಿಸಿದ್ರು ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts