More

    ಮತ್ತೆ ದೇವರ ಮೊರೆ ಹೋದ ‘ಏಕ್​ಲವ್​ಯಾ’; ಬಿಡುಗಡೆ ಆಯ್ತು ‘ಒಂದು ಊರಲಿ.. ಕೊನೇ ಬೀದಿಲಿ…’

    ಬೆಂಗಳೂರು: ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂದಿದ್ದ ‘ಏಕ್​ಲವ್​ಯಾ’ ಇದೀಗ ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾನೆ. ಮಾತ್ರವಲ್ಲ ‘ಪ್ರೀತೀನೇ ದೇವರು ಅಂತ ಹೇಳಿದವರು ಯಾರು? ದೇವರೊಬ್ಬ ಬಿಸಿನೆಸ್​ಮ್ಯಾನ್ ಕಣೋ..’ ಎಂದೂ ಹೇಳಲಾರಂಭಿಸಿದ್ದಾನೆ.

    ಅರ್ಥಾತ್, ‘ಏಕ್​ಲವ್​ಯಾ’ ಸಿನಿಮಾದ ಮತ್ತೊಂದು ಹಾಡಲ್ಲೂ ಇದೀಗ ದೇವರನ್ನು ನೆನಪಿಸಿಕೊಳ್ಳಲಾಗಿದೆ. ಈ ಚಿತ್ರದ ನಾಲ್ಕನೇ ಸಾಂಗ್ ‘ಒಂದು ಊರಲಿ.. ಕೊನೇ ಬೀದಿಲಿ..’ ಇಂದು ಬಿಡುಗಡೆ ಆಗಿದೆ. ಪ್ರಿಯಕರನ ನೆನಪಲ್ಲಿ ಹೀರೋಯಿನ್ ಹಾಡುವ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂಬ ಬ್ರೇಕಪ್​ ಸಾಂಗ್​ಗೆ ತಾವೇ ಸಾಹಿತ್ಯ ರಚಿಸಿದ್ದ ನಿರ್ದೇಶಕ ಪ್ರೇಮ್​, ಇದೀಗ ಹೀರೋ ಪ್ರೇಯಸಿ ಗುಂಗಲ್ಲಿ ದೇವತೆ-ದೇವರನ್ನು ನೆನಪಿಸಿಕೊಳ್ಳುವ ದೃಶ್ಯಾವಳಿಯ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಶರಣಕುಮಾರ್ ಗಜೇಂದ್ರಗಡ ಸಾಹಿತ್ಯ ರಚಿಸಿರುವ ಈ ಹಾಡನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಶಂಕರ್ ಮಹದೇವನ್ ಹಾಡಿದ್ದಾರೆ.

    ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆಗೆ ಸೇರಿದ; ಬೈಕ್​ನಿಂದ ಬಿದ್ದ ಯುವಕನ ಬ್ರೇನ್​ಡೆತ್​; ಪೊಲೀಸರ ವಿರುದ್ಧ ಪಾಲಕರ ಆರೋಪ

    ‘ಏಕ್​ಲವ್​ಯಾ’ ಚಿತ್ರದ ಮೂರನೇ ಸಾಂಗ್ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಕೆಲವು ದಿನಗಳ ಕಾಲ ಯೂ-ಟ್ಯೂಬ್​ನಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿತ್ತು. ಮಾತ್ರವಲ್ಲ ಇದುವರೆಗೆ 85 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಪ್ರೇಮ್ ನಿರ್ದೇಶನ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್​ಲವ್​ಯಾ’ ಸಿನಿಮಾದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಅಭಿನಯಿಸಿದ್ದು, ರಚಿತಾ ರಾಮ್ ಮತ್ತು ರೀಷ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರ ಜ. 21ರಂದು ತೆರೆ ಕಾಣಲಿದೆ.

    ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts