ಜಗತ್ಸಿಂಗ್ಪುರ್: ಯುವಕನೊಬ್ಬ ತಹಸೀಲ್ದಾರ್ ಕಾರಿನ ಮೇಲೆ ಹಾಡಹಗಲಲ್ಲೇ ದಾಳಿ ಮಾಡಿರುವ ಘಟನೆ ಒಡಿಶಾದ ಜಗತ್ಸಿಂಗ್ಪುರ್ ಜಿಲ್ಲೆಯ ಜಪ ಛ್ಚಾಕ್ನಲ್ಲಿ ನಡೆದಿದೆ. ಕರೊನಾ ಲಾಕ್ಡೌನ್ ಮಾನದಂಡಗಳ ಜಾರಿಗಾಗಿ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಜಪ ಚ್ಛಾಕ್ನಲ್ಲಿ ಲಾಕ್ಡೌನ್ ನಿಯಮ ಮೀರಿ ಅಂಗಡಿಗಳನ್ನು ತೆರೆದು ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಬಳಿಕ ತಹಸೀಲ್ದಾರ್ ಚೌಧರಿ ಪ್ರಜ್ಞಾನಂದನ್ ದಾಸ್ ನೇತೃತ್ವದ ತಂಡವೊಂದು ಅಲ್ಲಿಗೆ ತೆರಳಿತ್ತು. ಅಂಗಡಿಯನ್ನು ಮುಚ್ಚಿಸಿ, ಅದರ ಮಾಲೀಕರಿಗೆ ಎಚ್ಚರಿಕೆ ನೀಡಿ ಹೊರಡಬೇಕೆನ್ನುವಷ್ಟರಲ್ಲಿ ಘಟನೆ ನಡೆದಿದೆ.
ಓರ್ವ ಅಂಗಡಿಯವ ತಹಸೀಲ್ದಾರ್ ಕಾರಿಗೆ ಕಾಲಿನಿಂದ ಒದ್ದು, ಕಿಟಕಿಗೆ ಕಲ್ಲು ಬೀಸಾಡಿದ್ದು, ಸಂಪೂರ್ಣ ಹಾನಿಯಾಗಿದೆ. ಈ ವೇಳೆ ಅಧಿಕಾರಿಗಳು ಸಹ ಕಾರಿನ ಒಳಗಡೆಯೇ ಇದ್ದರು.
ಹೇಗೋ ಅವನಿಂದ ಹಾನಿಯಾಗದಂತೆ ತಪ್ಪಿಸಿಕೊಂಡ ಅಧಿಕಾರಿಗಳು ತಕ್ಷಣ ಎರಸಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಯುವಕ ಅಥವಾ ಅಂಗಡಿಯವನನ್ನು ಬಂಧಿಸಲಾಗಿದ್ದು, ಆತನನ್ನು ಚಂದನ್ ಬೆಹೆರಾ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)
ಆಸ್ಪತ್ರೆಯೊಳಗೆ ರೋಗಿ ನಾಪತ್ತೆಯಾದ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್!
ಬಾಬಿ ಡಿಯೋಲ್ ಪುತ್ರನ 20ನೇ ಜನ್ಮದಿನ; ಆಕರ್ಷಕ ರೂಪ ಮೆಚ್ಚಿದ ನೆಟ್ಟಿಗರು
ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಮಹಿಳೆ ಮಾಡಿದ ಕೆಲಸವೇನು ನೋಡಿ..