ಹುಬ್ಬಳ್ಳಿ: ಇಲ್ಲಿಯ ಯೂಥ್ ಾರ್ ಸೇವಾ ಸಂಸ್ಥೆಯ ಘಟಕ ಹಾಗೂ ಆಯುರ್ವೇದ ಮಹಾವಿದ್ಯಾಲಯದ ಸ್ವಯಂ ಸೇವಕ ವಿದ್ಯಾರ್ಥಿಗಳು ನಗರದ 10 ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸಿದರು.
ಋತುಸ್ರಾವ , ಸ್ವಚ್ಛತೆ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲಾಯಿತು. ವಿವಿಧ ಶಾಲೆಗಳ ಸುಮಾರು 560 ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸೇವಿಸುವ ಆಹಾರ ಮತ್ತು ಮನುಷ್ಯನ ಆರೋಗ್ಯ ಸ್ಥಿತಿಯ ನಡುವೆ ನೇರ ಸಂಬಂಧವಿದೆ. ಆಧುನಿಕ ರೋಗಗಳು ಕೆಟ್ಟ ಆಹಾರ ಪದ್ಧತಿಯಿಂದ ಉಂಟಾಗುತ್ತವೆ. ತಾಜಾ, ಶುದ್ಧ ಮತ್ತು ಪೌಷ್ಟಿಕ ಆಹಾರದ ನಿಯಮಿತ ಸೇವನೆಯು ಮಗುವನ್ನು ದೈಹಿಕ ಮತ್ತು ಮಾನಸಿಕವಾಗಿ ಸರಿಯಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಪ್ರೌಢಾವಸ್ಥೆಯಲ್ಲಿ ಮಕ್ಕಳು ಹೆಚ್ಚು ದುರ್ಬಲರಾಗುತ್ತಾರೆ. ಅವರು ಸಾಮಾನ್ಯವಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಎಂದರು.
ಈ ಕಾರ್ಯಕ್ರಮವು 4 ಪ್ರಧಾನ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಮುಟ್ಟಿನ ನೈರ್ಮಲ್ಯ, ಜನನಾಂಗದ ನೈರ್ಮಲ್ಯ, ಮಕ್ಕಳಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಒಳ್ಳೆಯ, ಕೆಟ್ಟ ಸ್ಪರ್ಶ ಇವು ಪ್ರಮುಖವಾಗಿವೆ ಎಂದರು.