ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿ ಮುಕೇಶ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ಸಾರಾಸಗಟಾಗಿ ತಿರಸ್ಕರಿಸಿದೆ.
ವಿಚಾರಣಾ ನ್ಯಾಯಾಲಯ ಕೊಟ್ಟಿದ್ದ ಮರಣದಂಡನೆ ತೀರ್ಪನ್ನು ಬದಿಗಿರಿಸುವಂತೆ ಕೋರಿ ಮುಕೇಶ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಅರ್ಜಿಯಲ್ಲಿರುವ ಅಂಶಗಳನ್ನು ತಿರಸ್ಕರಿಸಿತು. ಅಲ್ಲದೆ, ವಿಚಾರಾಣಾ ನ್ಯಾಯಾಲಯಕ್ಕೇ ಮನವಿ ಸಲ್ಲಿಸುವಂತೆ ಸೂಚಿಸಿ, ದಯಾ ಅರ್ಜಿ ಬಾಕಿ ಇರುವ ವಿಚಾರ ಸ್ಪಷ್ಟಪಡಿಸಿ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಮುಕೇಶ್ನ ಕ್ಯುರೇಟಿವ್ ಪಿಟಿಷನ್ ತಿರಸ್ಕರಿಸಿದ ನಂತರದಲ್ಲಿ ಆತ, ಹೈಕೋರ್ಟ್ ಮೆಟ್ಟಿಲೇರಿದ್ದ. ಈಗ ಉಳಿದಿರುವುದು ದಯಾ ಅರ್ಜಿ ಮಾತ್ರ. (ಏಜೆನ್ಸೀಸ್)