ನಾಗ್ಪುರ: ಮಹಾರಾಷ್ಟ್ರದ ವಿದರ್ಭದ ಅಕೋಲಾ-ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರದ್ದಾಗಿದೆ. ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಚುನಾವಣೆಯನ್ನು ರದ್ದುಮಾಡಿ ಮಂಗಳವಾರ ಆದೇಶ ನೀಡಿದೆ. ಏಪ್ರಿಲ್ 26 ರಂದು ಉಪ ಚುನಾವಣೆ ನಿಗದಿಯಾಗಿತ್ತು.
ಇದನ್ನೂ ಓದಿ: ಲಡಾಖ್ಗೆ ರಾಜ್ಯ ಸ್ಥಾನಮಾನ: 21 ದಿನಗಳ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್ಚುಕ್
ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಎಂಎಸ್ ಜವಾಲ್ಕರ್ ಅವರ ವಿಭಾಗೀಯ ಪೀಠವು ಕಳೆದ ವರ್ಷ ನವೆಂಬರ್ 3 ರಂದು ಈ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಗೋವರ್ಧನ್ ಶರ್ಮಾ ನಿಧನರಾಗಿದ್ದರು. ನಂತರ ತೆರವಾದ ವಿಧಾನಸಭಾ ಸ್ಥಾನಕ್ಕೆ ಯಾವುದೇ ಉಪಚುನಾವಣೆ ನಡೆಸಬಾರದು ಎಂದು ಹೇಳಿದೆ.
ಪ್ರಸ್ತುತ ವಿಧಾನಸಭೆಯ ಅಂತ್ಯದ ಒಂದು ವರ್ಷಕ್ಕೂ ಕೆಳಗಿದ್ದರೆ ಉಪ ಚುನಾವಣೆ ನಡೆಸಬಾರದು ಎನ್ನುವ ಅರ್ಜಿದಾರರ ವಾದವನ್ನು ಎತ್ತಿ ಹಿಡಿದ ಹೈಕೋರ್ಟ್ ಏಪ್ರಿಲ್ 26ಕ್ಕೆ ನಡೆಯಬೇಕಿದ್ದ ಉಪ ಚುನಾವಣೆಯನ್ನು ರದ್ದುಗೊಳಿಸಿ ಚುನಾವಣಾ ಆಯೋಗ ವಿರುದ್ಧ ಆದೇಶ ನೀಡಿದೆ.
ಉಪಚುನಾವಣೆ ಘೋಷಣೆಯಾದ ಬೆನ್ನೆಲ್ಲೇ ಅದರ ವಿರುದ್ದ ಅನಿಲ್ ಧುಬೆ ಎಂಬ ವ್ಯಕ್ತಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕೇಜ್ರಿವಾಲ್ ಬಂಧನ ಪ್ರಕರಣ: ಪಾರದರ್ಶಕ ತನಿಖೆಯಾಗಲಿ ಭಾರತಕ್ಕೆ ಅಮೆರಿಕ ಸಲಹೆ!