More

    ಖ್ಯಾತ ನಟಿಗೆ ದುಬೈನಲ್ಲಿ 50 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ರಾ ಉದಯನಿಧಿ?! ಸಂಚಲನ ಸೃಷ್ಟಿಸಿದ ಹೇಳಿಕೆ

    ಚೆನ್ನೈ: ನಟಿ ತ್ರಿಷಾ 25 ಲಕ್ಷ ರೂಪಾಯಿಗಾಗಿ ರಾಜಕಾರಣಿಯ ಜತೆ ಮಲಗಿದ್ದಳು ಎಂದು ಇತ್ತೀಚೆಗೆ ರಾಜಕೀಯ ನಾಯಕನೊಬ್ಬ ಮಾಡಿದ್ದ ಆರೋಪ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ನಟಿಯ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಬಾರಿ ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ ಹಾಗೂ ಸಚಿವ ಉದಯನಿಧಿ ಹೆಸರು ಕೂಡ ತಳುಕು ಹಾಕಿಕೊಂಡಿದೆ.

    ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​, ಯೂಟ್ಯೂಬರ್​ ಹಾಗೂ ಪತ್ರಕರ್ತ ಸುವುಕ್ಕು ಶಂಕರ್ ಅವರ ಇತ್ತೀಚಿನ ವಿಡಿಯೋ ತುಣುಕೊಂದು ತಮಿಳುನಾಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸದಾ ತಮ್ಮ ಯೂಟ್ಯೂಬ್​ ಮೂಲಕ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರನ್ನು ಟೀಕಿಸುವ ಶಂಕರ್​, ಇದೀಗ ನಟಿ ನಿವೇತಾ ಪೇತುರಾಜ್​ ಮತ್ತು ಉದಯನಿಧಿ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಶಂಕರ್​ ಆರೋಪಕ್ಕೆ ನಿವೇತಾ ಕೂಡ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಏನಿದು ವಿವಾದ ಎಂಬುದನ್ನು ನಾವೀಗ ತಿಳಿಯೋಣ.

    ಉದಯನಿಧಿ ಸ್ಟಾಲಿನ್​ ಅವರು ನಟಿ ನಿವೇತಾ ಪೇತುರಾಜ್​ಗೆ 50 ಕೋಟಿ ರೂ. ಮೌಲ್ಯದ ಮನೆಯನ್ನು ಖರಿದೀಸಿದ್ದಾರೆ. ಈ ಮನೆ ಭಾರತದಲ್ಲಿಲ್ಲ ಬದಲಾಗಿ ದುಬೈನಲ್ಲಿದೆ. ಭಾರತದಲ್ಲಿ ಬಿಟ್ಟು ದುಬೈನಲ್ಲಿ ಖರೀದಿಸಿದ್ದೇಕೆ? ನಿವೇತಾ ಮೇಲೆ ಉದಯನಿಧಿಗೆ ವ್ಯಾಮೋಹವಿದೆ. ಆಕೆಯನ್ನು ಇಲ್ಲಿ ಇರಿಸುವುದು ಬೇಡ ಎಂಬ ನಿರ್ಧಾರದಿಂದ ದುಬೈನಲ್ಲಿ ಮನೆ ಖರೀದಿ ಮಾಡಿದ್ದಾರೆ. ಆಕೆ ತಮಿಳುನಾಡಿಗೆ ತಿಂಗಳಿಗೆ ಎರಡು ಬಾರಿ ಮಾತ್ರ ಬರುತ್ತಾಳೆ. ಆಕೆಗೋಸ್ಕರ ತಮಿಳುನಾಡಿನಲ್ಲಿ ಕ್ರೀಡಾ ಸ್ಪರ್ಧೆ ಸಹ ಆಯೋಜನೆ ಮಾಡಿದ್ದರು ಎಂದು ಶಂಕರ್​ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ನಿವೇತಾ ತಿರುಗೇಟು
    ಶಂಕರ್​ ಆರೋಪಕ್ಕೆ ನಿವೇತಾ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. ನನಗೋಸ್ಕರ ಹಣ ಖರ್ಚು ಮಾಡಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನಾನು ಇಲ್ಲಿಯವರೆಗೂ ಮೌನವಾಗಿದ್ದೆ. ಏಕೆಂದರೆ, ಒಂದು ಹುಡುಗಿಯ ಬದುಕನ್ನು ಹಾಳುಮಾಡುವ ಮುನ್ನ ಸತ್ಯವನ್ನು ಅರಿತು ಮಾತನಾಡುವ ಒಂದಷ್ಟು ಮಾನವೀಯತೆ ಇರುವವರು ಇರುತ್ತಾರೆ ಅಂದುಕೊಂಡಿದ್ದೆ. ಆದರೆ ಈ ಸುದ್ದಿಯಿಂದ ನಾನು ಮತ್ತು ನನ್ನ ಕುಟುಂಬ ತೀವ್ರ ಖಿನ್ನತೆಗೆ ಒಳಗಾಗಿದೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಯೋಚಿಸಿ. ನಾನು ಬಹಳ ಗೌರವಾನ್ವಿತ ಕುಟುಂಬದಿಂದ ಬಂದಿದ್ದೇನೆ. ನಾನು 16 ವರ್ಷ ವಯಸ್ಸಿನವನಾಗಿದ್ದಾಗಿನಿಂದ ಆರ್ಥಿಕವಾಗಿ ಸ್ವತಂತ್ರಳಾಗಿದ್ದೇನೆ. ನನ್ನ ಕುಟುಂಬ ಇನ್ನೂ ದುಬೈನಲ್ಲಿ ವಾಸಿಸುತ್ತಿದೆ. ನಾವು 20 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದೇವೆ. ನನಗೆ ಚಿತ್ರರಂಗದಲ್ಲಿ ಅವಕಾಶ ಕೊಡಿ ಎಂದು ನಾನು ಯಾವುದೇ ನಿರ್ಮಾಪಕ, ನಿರ್ದೇಶಕ ಅಥವಾ ನಾಯಕನ ಬಳಿ ಕೇಳಿಲ್ಲ ಎಂದು ಹೇಳಿದ್ದಾರೆ.

    ಇಲ್ಲಿವರೆಗೂ 20ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಅವೆಲ್ಲವೂ ನನ್ನನ್ನು ಅರಸಿ ಬಂದವು. ನಾನು ಯಾರ ಬಳಿಯೂ ಅವಕಾಶಕ್ಕಾಗಿ ಹೋಗಿಲ್ಲ. ಇಲ್ಲಿಯವರೆಗೆ ನನ್ನ ಬಗ್ಗೆ ಮಾತನಾಡಿರುವ ಯಾವುದೇ ಮಾಹಿತಿಯು ನಿಜವಲ್ಲ. ನಾವು 2002ರಿಂದ ದುಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಅಲ್ಲದೆ, 2013 ರಿಂದ ನನಗೆ ರೇಸಿಂಗ್ ಬಗ್ಗೆ ಆಸಕ್ತಿ ಇತ್ತು. ನಿಜವಾಗಿ ಚೆನ್ನೈನಲ್ಲಿ ನಡೆಯುವ ರೇಸ್‌ಗಳ ಬಗ್ಗೆ ನನಗೆ ಗೊತ್ತಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೇನೆ ಎಂದು ನೀವು ಭಾವಿಸುತ್ತೀರಿ. ನಾನು ತುಂಬಾ ಸರಳ ಜೀವನ ನಡೆಸುತ್ತಿದ್ದೇನೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಈಗ ಮಾನಸಿಕವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ನಿಮ್ಮ ಕುಟುಂಬದ ಇತರ ಮಹಿಳೆಯರಿಗೆ ನೀವು ಅದೇ ರೀತಿ ಬಯಸುತ್ತೀರಾ? ಪತ್ರಿಕೋದ್ಯಮದಲ್ಲಿ ಮಾನವೀಯತೆ ಉಳಿದಿದೆ. ನನ್ನ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂಬ ನಂಬಿಕೆಯಿಂದ ನಾನು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ನನ್ನ ಕುಟುಂಬಕ್ಕೆ ಯಾವುದೇ ನೋವನ್ನುಂಟು ಮಾಡಬೇಡಿ ಎಂದು ಪತ್ರಕರ್ತರಲ್ಲಿ ವಿನಂತಿಸುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದು ನಿವೇತಾ ಪೇತುರಾಜ್ ಸುದೀರ್ಘ ಟ್ವೀಟ್ ಮಾಡಿದ್ದಾರೆ.

    ಅಂದಹಾಗೆ ಉದಯನಿಧಿ ಮತ್ತು ನಿವೇತಾ ಈ ಹಿಂದೆ ಪೊಡುವಾಗ ಎಂಮನಸು ತಂಗಂ ಚಿತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ಡಿಂಪಲ್​ ಹಯಾತಿ ಮನೆಯಲ್ಲಿ ವೈನ್​ ಬಾಟಲ್​ ಇಟ್ಟು ವಿಶೇಷ ಪೂಜೆ! ಜ್ಯೋತಿಷಿ ವೇಣುಸ್ವಾಮಿ ಹೇಳಿಕೆಗೆ ಆಕ್ರೋಶ

    ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಕುಣಿದು ಕುಪ್ಪಳಿಸಿದ ಸೆಲೆಬ್ರಿಟಿಗಳಿಗೆ ಟಾಂಗ್​ ಕೊಟ್ರಾ ಕಂಗನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts