ಬೆಂಗಳೂರು: ವಿವಾದಿತ ಸ್ವಾಮಿ ನಿತ್ಯಾನಂದ ಕೈಲಾಸ ದೇಶವನ್ನು ನಿರ್ಮಿಸಿಕೊಂಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ತನ್ನದೇ ಆದ ಹೊಸ ಪ್ರಪಂಚವನ್ನೇ ಸೃಷ್ಟಿಸಿಕೊಂಡಿರುವ ನಿತ್ಯಾನಂದ ಇದೀಗ ತನ್ನ ಪ್ರಪಂಚಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೆ ಶಾಕ್! ಸುವೇಂದು ನಂತರ ಟಿಎಂಸಿಯಿಂದ ಮತ್ತೆರೆಡು ವಿಕೆಟ್ ಔಟ್!
ಫೇಸ್ಬುಕ್ನಲ್ಲಿ ಉಪನ್ಯಾಸ, ಸತ್ಸಂಗದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುವ ನಿತ್ಯಾನಂದ ಇದೀಗ ಅದೇ ವಿಡಿಯೋ ಮೂಲಕ ಭಕ್ತರಿಗೆ ತನ್ನ ದೇಶಕ್ಕೆ ಬರಲು ಕರೆ ನೀಡಿದ್ದಾನೆ. ಆಸ್ಪ್ರೇಲಿಯಾಕ್ಕೆ ವೀಸಾ ತೆಗೆದುಕೊಂಡು ಬನ್ನಿ. ಅಲ್ಲಿಂದ ನಮ್ಮ ಪ್ರೈವೇಟ್ ಚಾರ್ಟೆಟ್ ಪ್ಲೇನ್ನಲ್ಲಿ ನಿಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಬರಲಾಗುವುದು ಎಂದು ಆತ ಹೇಳಿದ್ದಾನೆ. ಇದರ ಜತೆ ನಮ್ಮ ಕೈಲಾಸಕ್ಕೆ ಬರಲು ವೀಸಾಕ್ಕೆ ಯಾವುದೇ ಶುಲ್ಕವಿಲ್ಲ ಎಂದೂ ಆತ ಹೇಳಿದ್ದಾನೆ.
ಇದನ್ನೂ ಓದಿ: ಪೊಲೀಸ್ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!
ಭಾರತದಿಂದ ಪರಾರಿಯಾಗಿ ಕೈಲಾಸ ನಿರ್ಮಿಸಿಕೊಂಡಿರುವ ನಿತ್ಯಾನಂತ ಹಲವಾರು ವಿಚಾರಗಳ ವಿವಾದದಲ್ಲಿ ಸಿಲುಕಿಕೊಂಡಿದ್ದಾನೆ. ಕಳೆದ ಆಗಸ್ಟ್ನಲ್ಲಿ ತನ್ನದೇ ಆದ ರಿಸರ್ವ್ ಬ್ಯಾಂಕ್ನ್ನು ತೆರೆದಿರುವುದಾಗಿಯೂ ಆತ ಹೇಳಿಕೊಂಡಿದ್ದ. (ಏಜೆನ್ಸೀಸ್)
ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು! ಉಕ್ರೇನ್, ರಷ್ಯಾದ ಮಕ್ಕಳಿಗೂ ಉಸಿರು ನೀಡಿದ ಬಾಲಕ
ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!