More

    ನಿರ್ಭಯಾ ಅಪರಾಧಿ ಮುಕೇಶ್​ ಸಿಂಗ್​ಗೆ ತಿಹಾರ್​ ಜೈಲಿನಲ್ಲಿ ಲೈಂಗಿಕ ಕಿರುಕುಳ: ಅಪರಾಧಿ ಪರ ವಕೀಲೆ ಕೋರ್ಟ್​ಗೆ ಮಾಹಿತಿ

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್​ ಸಿಂಗ್​ಗೆ ತಿಹಾರ್​ ಜೈಲಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಅಪರಾಧಿ ಪರ ವಕೀಲೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಅಲ್ಲದೆ ಮುಕೇಶ್​ನ ದಯಾ ಅರ್ಜಿ ತಿರಸ್ಕಾರ ಆಗುವುದಕ್ಕಿಂತ ಮುಂಚೆ ಆತನನ್ನು ಒಬ್ಬನನ್ನೇ ಒಂದು ಕೊಠಡಿಯಲ್ಲಿ ಇರಿಸಲಾಗಿತ್ತು. ಇದು ಜೈಲು ನಿಯಮಗಳಿಗೆ ವಿರುದ್ಧ ಎಂದು ಅಪರಾಧಿ ಪರ ವಕೀಲೆ ಅಂಜನಾ ಪ್ರಕಾಶ್​ ವಾದಿಸಿದರು.

    ಇದಕ್ಕೆ ಪ್ರತ್ಯುತ್ತರವಾಗಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ಜೈಲಿನಲ್ಲಿನ ದುಃಖಗಳು ಕರುಣೆಗೆ ಕಾರಣವಾಗುವುದಿಲ್ಲ. ಅಲ್ಲದೆ ಮುಕೇಶ್​ನನ್ನು ಸೆಲ್​ನಲ್ಲಿ ಒಬ್ಬನನ್ನೇ ಇರಿಸಲಾಗಿಲ್ಲ ಎಂದರು.

    ಮರಣದಂಡನೆಗೆ ಒಳಪಟ್ಟ ಅಪರಾಧಿಯ ಕೆಲವೊಮ್ಮೆ, ವೈದ್ಯಕೀಯ ತಪಾಸಣೆ ಅವಶ್ಯವಾಗಿರುತ್ತದೆ. ಒಂದು ವೇಳೆ ಶಿಕ್ಷೆ ವಿಧಿಸಿದ ಅಪರಾಧಿಯ ಆರೋಗ್ಯ ಹದಗೆಟ್ಟರೆ ಅಂಥವರಿಗೆ ಮರಣದಂಡನೆ ವಿಧಿಸಲಾಗುವುದಿಲ್ಲ. ಆದರೆ ಈ ಸಂದರ್ಭದಲ್ಲಿ, ಮುಕೇಶ್​ನ ವೈದ್ಯಕೀಯ ಸ್ಥಿತಿ ಉತ್ತಮವಾಗಿದೆ ಎಂದು ನ್ಯಾಯಾಲಯಕ್ಕೆ ಮೆಹ್ತಾ ತಿಳಿಸಿದರು.

    ಪ್ರಕರಣಕ್ಕೆ ಸಂಬಂಧ ಪಟ್ಟ ಅಪರಾಧಿಗಳಿಗೆ ಶನಿವಾರ ಬೆಳಗ್ಗೆ 6ಕ್ಕೆ ಮರಣದಂಡನೆ ವಿಧಿಸಬೇಕಿದೆ. ಆದ್ದರಿಂದ ಮುಕೇಶ್​ ಸಲ್ಲಿಸಿರುವ ಅರ್ಜಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಹೇಳಿದರು. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts