ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ಗೆ ತಿಹಾರ್ ಜೈಲಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಅಪರಾಧಿ ಪರ ವಕೀಲೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಲ್ಲದೆ ಮುಕೇಶ್ನ ದಯಾ ಅರ್ಜಿ ತಿರಸ್ಕಾರ ಆಗುವುದಕ್ಕಿಂತ ಮುಂಚೆ ಆತನನ್ನು ಒಬ್ಬನನ್ನೇ ಒಂದು ಕೊಠಡಿಯಲ್ಲಿ ಇರಿಸಲಾಗಿತ್ತು. ಇದು ಜೈಲು ನಿಯಮಗಳಿಗೆ ವಿರುದ್ಧ ಎಂದು ಅಪರಾಧಿ ಪರ ವಕೀಲೆ ಅಂಜನಾ ಪ್ರಕಾಶ್ ವಾದಿಸಿದರು.
ಇದಕ್ಕೆ ಪ್ರತ್ಯುತ್ತರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜೈಲಿನಲ್ಲಿನ ದುಃಖಗಳು ಕರುಣೆಗೆ ಕಾರಣವಾಗುವುದಿಲ್ಲ. ಅಲ್ಲದೆ ಮುಕೇಶ್ನನ್ನು ಸೆಲ್ನಲ್ಲಿ ಒಬ್ಬನನ್ನೇ ಇರಿಸಲಾಗಿಲ್ಲ ಎಂದರು.
ಮರಣದಂಡನೆಗೆ ಒಳಪಟ್ಟ ಅಪರಾಧಿಯ ಕೆಲವೊಮ್ಮೆ, ವೈದ್ಯಕೀಯ ತಪಾಸಣೆ ಅವಶ್ಯವಾಗಿರುತ್ತದೆ. ಒಂದು ವೇಳೆ ಶಿಕ್ಷೆ ವಿಧಿಸಿದ ಅಪರಾಧಿಯ ಆರೋಗ್ಯ ಹದಗೆಟ್ಟರೆ ಅಂಥವರಿಗೆ ಮರಣದಂಡನೆ ವಿಧಿಸಲಾಗುವುದಿಲ್ಲ. ಆದರೆ ಈ ಸಂದರ್ಭದಲ್ಲಿ, ಮುಕೇಶ್ನ ವೈದ್ಯಕೀಯ ಸ್ಥಿತಿ ಉತ್ತಮವಾಗಿದೆ ಎಂದು ನ್ಯಾಯಾಲಯಕ್ಕೆ ಮೆಹ್ತಾ ತಿಳಿಸಿದರು.
ಪ್ರಕರಣಕ್ಕೆ ಸಂಬಂಧ ಪಟ್ಟ ಅಪರಾಧಿಗಳಿಗೆ ಶನಿವಾರ ಬೆಳಗ್ಗೆ 6ಕ್ಕೆ ಮರಣದಂಡನೆ ವಿಧಿಸಬೇಕಿದೆ. ಆದ್ದರಿಂದ ಮುಕೇಶ್ ಸಲ್ಲಿಸಿರುವ ಅರ್ಜಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹೇಳಿದರು. (ಏಜೆನ್ಸೀಸ್)