More

    ನವ ವಿವಾಹಿತ ಆತ್ಮಹತ್ಯೆ, ಕ್ವಾರಂಟೈನ್​ ಕೇಂದ್ರದಲ್ಲಿ ನಡೆದದ್ದಾದರೂ ಏನು?

    ಬೀದರ್​: ಪ್ರೀತಿಸಿ ಎರಡು ತಿಂಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗೆ ಅಂದುಕೊಂಡಂತೆ ಎಲ್ಲವೂ ಸರಿ ಇದ್ದಿದ್ದರೆ ಸಂಸಾರದ ಬಂಡಿ ಸರಿಯಾಗೇ ನಡೆಯುತಿತ್ತು. ಆದರೆ, ಅದ್ಹೇನಾಯ್ತೋ ಏನೋ ಕೈ ಹಿಡಿದ ಹೆಂಡತಿಯನ್ನು ಒಬ್ಬಂಟಿ ಮಾಡಿ ಆತ ಬಾರದ ಲೋಕಕ್ಕೆ ಹೋಗಿದ್ದಾನೆ. ಖುಷಿಯಾಗಿ ಇರಬೇಕಿದ್ದ ನವಜೋಡಿಯ ದಾಂಪತ್ಯ ಕರೊನಾ ಕ್ವಾರಂಟೈನ್​ ಕೇಂದ್ರದಲ್ಲಿ ದುರಂತ ಅಂತ್ಯಕಂಡಿದೆ.

    ಇದನ್ನೂ ಓದಿರಿ ಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?

    ನಾರಾಯಣಪುರ ಗ್ರಾಮದ ಸಚಿನ್ ತೇಜೆರಾವ್ ಜಾಧವ್ (21) ಮೃತ. ಮೇ 19ರಂದು ಪತ್ನಿ ಜತೆ ಸಚಿನ್ ತೇಜೆರಾವ್ ಮುಂಬೈನಿಂದ ಆಗಮಿಸಿದ್ದ. ಹಾಗಾಗಿ ಇವರಿಬ್ಬರನ್ನೂ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮ ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಮಂಗಳವಾರ ಬೆಳಗಿನ ಜಾವ ಸಚಿನ್​ ತೇಜೆರಾಜ್​ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ತಡರಾತ್ರಿವರೆಗೂ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು ಎಂಬ ಮಾಹಿತಿ ಇದೆ. ಔರಾದ್ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿರಿ ಕ್ವಾರಂಟೈನ್​ ಕೇದ್ರದಲ್ಲಿ ಮತ್ತೊಂದು ಸಾವು, ಮುಂದುವರಿದ ಆತ್ಮಹತ್ಯೆ ಸರಣಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts