More

    ಇಬ್ಬನಿ ತಬ್ಬಿದ ಅಂಕಿತಾ; ಬೇಸಿಗೆಯ ಘಮ ಚಳಿಗಾಲದ ಹಿತ ಮಳೆಗಾಲದ ಮಾಧುರ್ಯ

    ಬೆಂಗಳೂರು: ‘ರಶ್ಮಿ’ ಚಿತ್ರದ ‘ಇಬ್ಬನಿ ತಬ್ಬಿದ ಇಳೆಯಲಿ …’ ಎಂಬ ಬಿ.ಆರ್. ಛಾಯಾ ಹಾಡಿರುವ ಹಾಡು ಇಂದಿಗೂ ಬಹಳ ಜನಪ್ರಿಯ. ಈಗ ಇದೇ ಹಾಡು ಚಿತ್ರವೊಂದರ ಶೀರ್ಷಿಕೆಯಾಗಿದೆ. ಕಳೆದ ತಿಂಗಳಷ್ಟೇ ವಿಹಾನ್ ಗೌಡ ಮತ್ತು ಅಂಕಿತಾ ಅಮರ್ ಅಭಿನಯದಲ್ಲಿ ಪರಂವಃ ಸ್ಟುಡಿಯೋಸ್​ನಡಿ ರಕ್ಷಿತ್ ಒಂದು ಹೊಸ ಚಿತ್ರ ನಿರ್ವಿುಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಈಗ ಅದೇ ಚಿತ್ರಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ …’ ಎಂಬ ಹೆಸರನ್ನು ಇಡಲಾಗಿದೆ.

    ‘ಇಬ್ಬನಿ ತಬ್ಬಿದೆ ಇಳೆಯಲಿ’ ಚಿತ್ರವನ್ನು ಚಂದ್ರಕಾಂತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಈ ಚಿತ್ರದ ಮೂಲಕ ಬೇಷರತ್ತು ಪ್ರೀತಿಯ ಕುರಿತು ಚಂದ್ರಕಾಂತ್ ಹೇಳುವುದಕ್ಕೆ ಹೊರಟಿದ್ದಾರಂತೆ. ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರದಲ್ಲಿ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವು ಇರುತ್ತದಂತೆ. ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಢಾವಸ್ತೆಯಲ್ಲಿ ಅಂತ್ಯವಾಗುತ್ತದಂತೆ.

    ವಿಹಾನ್ ಮತ್ತು ಅಂಕಿತಾ ಅಲ್ಲದೆ, ಈ ಚಿತ್ರದಲ್ಲಿ ಇನ್ನೊಬ್ಬ ನಾಯಕಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ನಾಯಕಿಯನ್ನು ಸದ್ಯದಲ್ಲೇ ಪರಿಚಯಿಸಲಾಗುತ್ತದಂತೆ. ಗಗನ್ ಬದೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣವಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭ ವಾಗಲಿದ್ದು, ಮುಂದಿನ ವರ್ಷದ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

    ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts