ಅಯೋಧ್ಯೆ: ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನರು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಇಂದು ಬಂದಿದ್ದು, ಅಯೋಧ್ಯೆಯ ರಾಮಮಂದಿರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ.
ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನೇಕ ಗಣ್ಯರು ಆಗಮಿಸುತ್ತಿದ್ದಾರೆ. ಕೆಲವರು ಈಗಾಗಲೇ ಆಗಮಿಸಿದ್ದಾರೆ. ರಾಜಕಾರಣಿಗಳಿಂದ ಹಿಡಿದು ಬಾಲಿವುಡ್ ತಾರೆಯರವರೆಗೂ ಎಲ್ಲರೂ ರಾಮಮಂದಿರದ ಪ್ರತಿಷ್ಠಾಪನೆಯನ್ನು ವೀಕ್ಷಿಸಲು ಬಯಸುತ್ತಿದ್ದಾರೆ. ಆದರೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಭಾಗವಾಗಲು ಕೆಲವು ಬಾಲಿವುಡ್ ಸೆಲೆಬ್ರಿಟಿಗಳಿಗೆ ಆಹ್ವಾನವಿಲ್ಲ. ಶಾರುಖ್ ಖಾನ್ನಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಕಳುಹಿಸಲಾಗಿಲ್ಲ.
ಅಮಿತಾಬ್ ಬಚ್ಚನ್, ರಜನಿಕಾಂತ್, ರಣಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಹಲವು ನಟರು ಅಯೋಧ್ಯೆಗೆ ತೆರಳಿದ್ದು, ಜನವರಿ 21 ರಂದು ಕೆಲವು ತಾರೆಯರು ಅಲ್ಲಿಗೆ ತಲುಪಿದ್ದರು. ಈ ಸೆಲೆಬ್ರಿಟಿಗಳ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ಆಹ್ವಾನವನ್ನು ಸ್ವೀಕರಿಸದ ಆ ಸೆಲೆಬ್ರಿಟಿಗಳ ಹೆಸರನ್ನು ನೋಡೋಣ ಬನ್ನಿ….
ಶಾರುಖ್ ಖಾನ್
ವರದಿಯ ಪ್ರಕಾರ, ಶಾರುಖ್ ಖಾನ್ ಅವರಿಗೆ ಆಹ್ವಾನವನ್ನು ಕಳುಹಿಸಲಾಗಿಲ್ಲ. ಈ ಆಹ್ವಾನವನ್ನು ಕಳುಹಿಸದಿರುವ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಸಲ್ಮಾನ್-ಅಮೀರ್
ಸಲ್ಮಾನ್ ಖಾನ್ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರಿಗೂ ಆಹ್ವಾನ ನೀಡಿಲ್ಲ. ಸಲ್ಮಾನ್ ಖಾನ್ ಹೊರತಾಗಿ ಅಮೀರ್ ಖಾನ್ ಅವರಿಗೂ ಆಹ್ವಾನ ನೀಡಿಲ್ಲ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
ಬಾಲಿವುಡ್ನ ಮೋಸ್ಟ್ ರೊಮ್ಯಾಂಟಿಕ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೂ ಆಹ್ವಾನ ನೀಡಲಾಗಿಲ್ಲ. ದೀಪಿಕಾ-ರಣವೀರ್ ಜೊತೆಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಕೂಡ ಇದಕ್ಕೆ ಹಾಜರಾಗುತ್ತಿಲ್ಲ.
ಹನುಮಾನ್ ಗರ್ಹಿ ಗುಡಿಸಿದ ಕಂಗನಾ
ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಂಗನಾ ರಣಾವತ್ ಜನವರಿ 21 ರಂದು ಭಾನುವಾರ ಅಯೋಧ್ಯೆಗೆ ಬಂದಿದ್ದರು. ಅವರು ಅಯೋಧ್ಯೆಯಲ್ಲಿ ಹನುಮಾನ್ ಗರ್ಹಿಯನ್ನು ಗುಡಿಸಿದರು. ಕಂಗನಾ ಪೊರಕೆ ಹಿಡಿದು ಗುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಹವನವನ್ನೂ ಮಾಡಿದರು. ಕಂಗನಾ ತಮ್ಮ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.