ನಾಯಕನಹಟ್ಟಿ: ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜರುಗಿತು. ಸಚಿವ ಶ್ರೀರಾಮುಲು, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿದರು.
ನೂತನ ಮಂಡಲ ಅಧ್ಯಕ್ಷರಾದ ಎ.ರಾಮರೆಡ್ಡಿ, ಡಾ.ಮಂಜುನಾಥ್, ಜಿಪಂ ಸದಸ್ಯರಾದ ಓಬಳೇಶ್, ಓ.ಮಂಜುನಾಥ್, ಮುಖಂಡರಾದ ರಾಮದಾಸ್, ಜಿ.ಎಂ.ಸುರೇಶ್, ಸಿದ್ದೇಶ್ ಯಾದವ್, ಪಪಂ ಸದಸ್ಯರಾದ ಎನ್.ಮಹಾಂತಣ್ಣ, ವೈ.ಗಿರಿಜಮ್ಮ, ನಾಗರಾಜ್, ಪರಮೇಶ್, ಸಿ.ಬಿ.ಮೋಹನ್, ಮಂಡಲ ಮಾಜಿ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಪಿ.ಶಿವಣ್ಣ ಮತ್ತಿತರರಿದ್ದರು.