More

    ನವಲಗುಂದದಲ್ಲಿ ಬೃಹತ್ ಶೋಭಾಯಾತ್ರೆ

    ನವಲಗುಂದ: ಪಟ್ಟಣದ ಆರ್ಯವೈಶ್ಯ ಸಮಾಜ ಹಾಗೂ ವಿವಿಧ ಸಂಘಟನೆಗಳು ಗುರುವಾರ ಆಯೋಜಿಸಿದ್ದ ರಾಮೋತ್ಸವ ನಿಮಿತ್ತ ಸ್ಥಳೀಯ ಗಣಪತಿ ದೇವಸ್ಥಾನದಿಂದ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಬೃಹತ್ ಶೋಭಾಯಾತ್ರೆ ಮೂಲಕ ಪಟ್ಟಣದಲ್ಲಿರುವ ರಾಮ ಮಂದಿರಕ್ಕೆ ಕರೆತರಲಾಯಿತು.

    ಮೆರವಣಿಗೆಯುದ್ದಕ್ಕೂ ಸುಮಂಗಲೆಯರು ಆರತಿ ಹಿಡಿದು ಸಂಭ್ರಮಿಸಿದರು. ಯುವಕರು ಕೇಸರಿ ಶಾಲು, ಪೇಠ ಧರಿಸಿ ‘ಜೈರಾಮ, ಶ್ರೀರಾಮ’ ಎಂಬ ಜಯಘೊಷ ಹಾಕುತ್ತ ಕರಡಿ ಮಜಲು, ಜಾಂಜ್ ಮೇಳಗಳ ನಿನಾದಕ್ಕೆ ಹೆಜ್ಜೆ ಹಾಕಿದರು. ವಾಸವಿ ಮಹಿಳಾ ಮಂಡಳದ ಸದಸ್ಯೆಯರು ಶ್ರೀರಾಮನ ಭಕ್ತಿಗೀತೆಗಳೊಂದಿಗೆ ಕೋಲಾಟ ಆಡಿದರು.

    ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಲೋಕನಾಥ ಹೆಬಸೂರ, ಮುರಳಿ ಹೆಬಸೂರ, ವಾಸವಿ ಮಹಿಳಾ ಮಂಡಳದ ಅಧ್ಯಕ್ಷೆ ಉಷಾರಾಣಿ ಧಾರವಾಡ, ಅಜಿತ್ ಆನೇಗುಂದಿ, ಎಸ್.ಎನ್. ಡಂಬಳ, ಈಶ್ವರ ಹೆಬಸೂರ, ಕಿರಣ ರಾಯಬಾಗಿ, ದಶರಥ ಕಲಾಲ, ದಯಾನಂದ ಹೊನಕೇರಿ, ಗುರುರಾಜ ಕಿರಾಣಿ, ಅಪ್ಪಣ್ಣ ಹಿರಗಣ್ಣವರ ಸೇರಿ, ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts