More

    ನವರಸಪುರ ಉತ್ಸವ ಆಚರಣೆಗೆ ಒತ್ತಾಯ

    ವಿಜಯಪುರ: ಕಳೆದ ಮೂರು ವರ್ಷಗಳಿಂದ ನಿಂತುಹೋಗಿರುವ ನವರಸಪುರ ಉತ್ಸವ ಆಚರಣೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಪರಿಸರ ಜಾಗೃತಿ ವೇದಿಕೆ ಹಾಗೂ ಬಿಜಾಪುರ ಹೆರ್ಟೆಜ್ ಫೌಂಡೇಶನ್ ಜಂಟಿ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ಮೈಸೂರು ದಸರಾ ಉತ್ಸವದಂತೆ ಸರಳವಾಗಿ ವಿಜಯಪುರ ನವರಸಪುರ ರಾಷ್ಟ್ರೀಯ ಉತ್ಸವವನ್ನು ಆಚರಿಸಬೇಕು. ರಾಜ್ಯದಲ್ಲಿ ಎಲ್ಲಾ ಉತ್ಸವಗಳು ಆಚರಿಸಿದಂತೆ ನವರಸಪುರ ಉತ್ಸವ ನಾಡಿನ ವೈಭವ ಸಾರುವ ರಾಷ್ಟ್ರೀಯ ಉತ್ಸವವಾಗಿದೆ. ತ್ವರಿತಗತಿಯಲ್ಲಿ ಜಿಲ್ಲಾಡಳಿತ ಸಭೆ ಕರೆದು ಉತ್ಸವಕ್ಕೆ ನಿಗದಿತ ದಿನಾಂಕ ನಿಗದಿ ಪಡಿಸಿ ಉತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು.
    ಸಂಗೀತ, ಸಾಹಿತ್ಯ, ಕಲೆ, ಸಾಂಸ್ಕೃತಿಕ ದೇಶ ವಿದೇಶಿಗರ ಭಾವ ಸಮ್ಮೇಳನ ಬೆಸೆಯುವ ಭಾವಸಂಗಮದ ಪ್ರತೀಕವಾಗಿರುವ ನವರಸಪುರ ಉತ್ಸವ ವಿಶ್ವವಿಖ್ಯಾತಿಯಾಗಿದೆ. ಆದ್ದರಿಂದ ಕಾರ್ಯಕ್ರಮ ಯೋಜಿಸಬೇಕು ಎಂದರು.
    ದಿ ಬಿಜಾಪುರ ಹೆರ್ಟೆಜ್ ಫೌಂಡೇಷನ್ ಸಂಚಾಲಕ ಹಮ್ಜಾ ಮಹಿಬೂಬ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಶರಣಗೌಡ ಬಿರಾದಾರ, ಕೃಷ್ಣಾಜಿ ಕುಲಕರ್ಣಿ, ಭೀಮಾಶಂಕರಯ್ಯ ವಿರಕ್ತಮಠ, ವಸಂತರಾವ ಕುಲಕರ್ಣಿ, ಬಾಸು ರಾಠೋಡ, ಮನೋಜಕುಮಾರ ಹೊಸಮನಿ, ಥಾವರು ನಾಯಕ, ರಾಘು ಹೊನ್ನಕಾಂಬಳೆ, ನದಿಮ ಇನಾಮದಾರ, ಸಂತೋಷ ಕವಲಗಿ, ರಾಜಕುಮಾರ ವಾಗಮೊರೆ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts