ವಿಜಯಪುರ: ಬಸವನಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನ ನೀಡುವ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿಗೆ ನಗರದ ಬಾಲಕರ ಸರ್ಕಾರಿ ಪಪೂ ಕಾಲೇಜಿನ ಪೌಢಶಾಲೆ ವಿಭಾಗದ ವಿಜ್ಞಾನ ಶಿಕ್ಷಕ, ಸಾಹಿತಿ ನಾರಾಯಣ ಬಾಬಾನಗರ ಆಯ್ಕೆಯಾಗಿದ್ದಾರೆ.
ಡಿಸೆಂಬರ್ ಕೊನೇ ವಾರದಲ್ಲಿ ನಡೆಯಲಿರುವ ದಶಮಾನೋತ್ಸವ ಹಾಗೂ ರಾಜ್ಯಮಟ್ಟದ ವಚನ ವೈಭವ ಕಾರ್ಯಕ್ರಮದಲ್ಲಿ ಪ್ರಶಸಿ ್ತ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಸಂಚಾಲಕ ಡಾ. ಮುರುಗೇಶ ಸಂಗಮ ತಿಳಿಸಿದ್ದಾರೆ.