More

    ನಂದಿನಿ,ಅಮೂಲ್ ವೀಲಿನ ಬೇಡ

    ಹಗರಿಬೊಮ್ಮನಹಳ್ಳಿ: ನಂದಿನಿ ಕೆಎಂಎಫ್ ಹಾಲಿನ ಉತ್ಪನ್ನಗಳನ್ನು ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಕ್ರಮವನ್ನು ಸರ್ಕಾರ ಕೈಬಿಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಎದುರು ಪ್ರತಿಭಟಿಸಿ ಉಪ ತಹಸೀಲ್ದಾರ್ ವಿಶ್ವೇಶ್ವರಯ್ಯ, ಅನ್ನದಾನೇಶ್ವರಗೆ ಶನಿವಾರ ಮನವಿ ಸಲ್ಲಿಸಿದರು.

    ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಿ.ಸಿದ್ದನಗೌಡ ಮಾತನಾಡಿ, ರಾಜ್ಯದಲ್ಲಿ ಕೆಎಂಎಫ್ ಒಕ್ಕೂಟದಿಂದ ನಂದಿನಿ ಉತ್ಪನ್ನಗಳು ತಮ್ಮದೇ ಆದ ಉತ್ಕೃಷ್ಟ ಗುಣಮಟ್ಟ ಹೊಂದಿವೆ. ಅಲ್ಲದೆ ರಾಜ್ಯದ ರೈತರ ಬಹುಪಾಲು ಕೊಡುಗೆಯಿಂದ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ.

    ನಂದಿನಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿ ಕರ್ನಾಟಕದ ಕೊಟ್ಯಾಂತರ ರೈತರ ಪಶು ಸಂಗೋಪನೆಗೆ ಸಹಾಯಕವಾಗಲು ಪ್ರೋತ್ಸಾಹ ನೀಡಬೇಕು. ಸರ್ಕಾರ ಯೋಚಿಸಿರುವ ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

    ರೈತ ಸಂಘದ ಮಹೇಶ್ ಬನ್ನಿಗೋಳ, ಅಲ್ಲಂಭಾಷಾ, ತಂಬ್ರಹಳ್ಳಿ ವೀರಣ್ಣ, ಎಂ.ಜಿ.ಮೃತ್ಯುಂಜಯಗೌಡ, ಜೆ.ಎಂ.ರುದ್ರಮುನಿಸ್ವಾಮಿ, ಆರ್.ಸಿದ್ದರೆಡ್ಡಿ, ಪಿ.ಬಸವನಗೌಡ, ಬೆಳಗುಂದಿ ಯಮನೂರಪ್ಪ, ಎಸ್.ವಿರೇಶ್, ಕೆ.ನಿಂಗಪ್ಪ ಇದ್ದರು.

    ಇದನ್ನೂ ಓದಿ: VIDEO| ನಂದಿನಿ ಜೊತೆ ಅಮೂಲ್​ ಸ್ಪರ್ಧಿಸುವ ಮಾತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts