More

    ಅಪ್ಪ ಅಮ್ಮನ ಉಸಿರುಗಟ್ಟಿಸಿ, ಬೆಂಕಿ ಹಚ್ಚಿ ಕೊಂದ ಮಕ್ಕಳು! ಪೊಲೀಸರು ಬಂದಾಗ ಬೇರೆಯದ್ದೇ ಕಥೆ ಹೇಳಿದರು

    ಲಖನೌ: ಹೆತ್ತು, ಹೊತ್ತು, ಸಾಕಿದ್ದ ಅಪ್ಪ ಅಮ್ಮನನ್ನು ಮಕ್ಕಳೇ ಉಸಿರುಗಟ್ಟಿಸಿ ಸಾಯಿಸಿ, ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ದಂಪತಿಯ ನಿಗೂಢ ಸಾವಿನ ತನಿಖೆ ನಡೆಸಿದ ಪೊಲೀಸರಿಗೆ ಘಟನೆಯ ನಿಜಾಂಶ ತಿಳಿದುಬಂದಿದೆ.

    ಇದನ್ನೂ ಓದಿ: ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕಾಣೆಯಾಗಿದ್ದ, ಈಗ ಅಸ್ಸಾಂನಲ್ಲಿ ಪತ್ತೆಯಾದ! ಗುರುತು ಪತ್ತೆ ಮಾಡಿದ್ದೇ ಒಂದು ಸಾಹಸ!

    ರಾಜೇಂದ್ರ (61) ಮತ್ತು ಆತನ ಪತ್ನಿ ರಾಜಾವತಿ (57) ಬರೇಲಿಯ ಸಂಜರ್​ಪುರ ಗುಲಾಲ್​ ಗ್ರಾಮದಲ್ಲಿ ವಾಸವಿದ್ದರು. ಇವರಿಗೆ ನಾಲ್ಕು ಗಂಡು ಮಕ್ಕಳಿದ್ದಾರಾದರೂ ಎಲ್ಲರೂ ಬೇರಾಗಿದ್ದು, ದಂಪತಿ ಇಬ್ಬರೇ ತಮ್ಮ ಮನೆಯಲ್ಲಿ ಜೀವನ ಕಳೆಯುತ್ತಿದ್ದರು. ಇಬ್ಬರು ಮಕ್ಕಳು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರೆ ಇನ್ನಿಬ್ಬರು ಬರೇಲಿಯಲ್ಲಿದ್ದರು. ಇತ್ತೀಚೆಗೆ ಈ ದಂಪತಿ ತಮ್ಮ ಕೋಣೆಯಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಅದಾಗಲೇ ಸ್ಥಳಕ್ಕೆ ಬಂದಿದ್ದ ಮಕ್ಕಳನ್ನು ವಿಚಾರಿಸಿದಾಗ ಅವರು, ಹೊದಿಕೆಗೆ ಬೆಂಕಿ ಹತ್ತಿರುವ ಕಾರಣ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಹೊರಬಿದ್ದಿದೆ. ದಂಪತಿ ಬೆಂಕಿಯಿಂದಲ್ಲ, ಉಸಿರು ಕಟ್ಟಿದ್ದರಿಂದಾಗಿ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದುಬಂದಿದೆ. ಈ ವಿಚಾರವಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆಗ ಮಕ್ಕಳ ಬಾಯಿಯಿಂದ ನಿಜಾಂಶ ಹೊರಗೆ ಬಂದಿದೆ.

    ಇದನ್ನೂ ಓದಿ: ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

    ಬರೇಲಿಯಲ್ಲಿದ್ದ ವಿಕ್ರಮ್​ ಮತ್ತು ಸುಮಿತ್ ಅಂದು ಮನೆಗೆ ಬಂದಿದ್ದು, ಅಪ್ಪನೊಂದಿಗೆ ಜಗಳವಾಡಿದ್ದಾರೆ. ಅಪ್ಪನ ಹೆಸರಿನಲ್ಲಿದ್ದ 10 ಎಕರೆ ಜಮೀನನ್ನು ಮಾರಿ, ಹಣ ಹಂಚುವಂತೆ ಪೀಡಿಸಿದ್ದಾರೆ. ಈ ವಿಚಾರವಾಗಿ ಆರಂಭವಾದ ಜಗಳ ತಾರಕಕ್ಕೇರಿದ್ದು, ಅಪ್ಪ ಅಮ್ಮನ ಕುತ್ತಿಗೆ ಒತ್ತಿ ಹಿಡಿದ ಮಕ್ಕಳು ಅವರನ್ನು ಸಾಯಿಸಿದ್ದಾರೆ. ನಂತರ ಇದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ನಂಬಿಸುವ ಸಲುವಾಗಿ ರೂಮಿನಲ್ಲಿ ಅವರನ್ನು ಮಲಗಿಸಿ, ಬೆಂಕಿ ಹಚ್ಚಿದ್ದಾರೆ. (ಏಜೆನ್ಸೀಸ್​)

    ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

    ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts