ಚೆನ್ನೈನಿಂದ ಬರುವಾಗ ಮೈಸೂರು ಪಾಕ್​, ಆಲೂ ಚಿಪ್ಸ್​ ತರದೇ ಬರಬೇಡಿ: ಪತಿ ರಣವೀರ್​ ಸಿಂಗ್​ಗೆ ದೀಪಿಕಾ ಪಡುಕೋಣೆ ತಾಕೀತು

blank

ನವದೆಹಲಿ: ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಆಶ್ಚರ್ಯಭರಿತ ಸುದ್ದಿಗಳನ್ನು ನೀಡುತ್ತಿರುತ್ತಾರೆ.

ಈಗ ಮತ್ತೆ ಅಂತಹ ಸುದ್ದಿ ಇದೆ, ನೋಡಿ. ರಣವೀರ್​ ಸಿಂಗ್​ ನಟನೆಯ ಕಬೀರ್​ ಖಾನ್​ ನಿರ್ದೇಶನದ 83 ಸಿನಿಮಾ ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ. ಇದೇ ಕೆಲಸಕ್ಕೆ ಚೆನ್ನೈಗೆ ತೆರಳಿದ್ದಾರೆ.

ಹೀಗೆ ಚೆನ್ನೈಗೆ ತೆರಳಿದ ಪತಿ ರಣವೀರ್​ ಹಂಚಿಕೊಂಡ ಫೋಟೋಗೆ ಕಮೆಂಟ್​ ಮಾಡಿರುವ ದೀಪಿಕಾ, ಚೆನ್ನೈನಿಂದ ಮರಳುವಾಗ ಮೈಸೂರು ಪಾಕ್​ ಮತ್ತು ಆಲೂ ಚಿಪ್ಸ್​ ಮರೆಯದೇ ತರಬೇಕು ಎಂದು ತಾಕೀತು ಮಾಡಿದ್ದಾರೆ.

ನಟ ರಣವೀರ್​ ಸಿಂಗ್​ ಶನಿವಾರ ತಮ್ಮ ನಟನೆಯ 83 ಸಿನಿಮಾ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಹ ನಟರ ಜತೆ ರಣವೀರ್​ ಪೋಸ್​ ಕೊಟ್ಟಿದ್ದು, ಕಪಿಲ್​ ಟೀಮ್​ಗೆ ಲಗ್ಗೆ ಹಾಕಲಿದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪತ್ನಿ, ನಟಿ ದಿಪಿಕಾ ಪ್ರತಿಕ್ರಿಯಿಸಿದ್ದು, ಶ್ರೀಕೃಷ್ಣ ಅಂಗಡಿಯಿಂದ 1 ಕೆ.ಜಿ. ಮೈಸೂರು ಪಾಕ್​ ಮತ್ತು ಎರಡೂವರೆ ಕೆಜಿ ಆಲೂ ಚಿಪ್ಸ್​ ತರಬೇಕು ಎಂದು ಕಮೆಂಟ್​ ಮಾಡಿದ್ದಾರೆ.

ಹಾಗೆಯೇ 83 ನಿದೇರ್ಶಕ ಕಬೀರ್​ ಪತ್ನಿಗೂ ಈ ವಿಷಯ ತಿಳಿಸಿ, ನಿಮ್ಮ ಮನೆಯವರಿಗೂ ತರಲು ತಿಳಿಸು ಎಂದಿರುವ ದೀಪಿಕಾ, ಕಬೀರ್​ ಖಾನ್​ ನೀವು ಈ ಆರ್ಡರ್​ನ್ನು ರಿಪೀಟ್​ ಮಾಡಿ ಎಂದಿದ್ದಾರೆ.

ಕಪಿಲ್​ದೇವ್​ ನಾಯಕತ್ವದಲ್ಲಿ 1983ರಲ್ಲಿ ಭಾರತ ಗೆದ್ದ ವಿಶ್ವಕಪ್​ ಕ್ರಿಕೆಟ್​ ಕತೆ ಇದೆ. ಈ ಬಗ್ಗೆ ತರಬೇತಿ ಪಡೆಯಲು ನಟ ರಣವೀರ್​ ಸಿಂಗ್​ ಖುದ್ದು ಕಪಿಲ್​ದೇವ್​ ಮನೆಗೆ ತೆರಳಿದ್ದರು. (ಏಜೆನ್ಸೀಸ್​)

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…