More

    ಕೊಲೆ ಪ್ರಕರಣ, ನಾಲ್ವರ ಬಂಧನ

    ಬೆಳಗಾವಿ: ರಸ್ತೆ ಅಪಘಾತ ಹೆಸರಿನಲ್ಲಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದ ಮೇಲೆ ನಗರದ ಟಿಳಕವಾಡಿ ಠಾಣೆ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದಾರೆ.

    ಅನಗೋಳದ ಉಮೇಶ ಕುರಿಹಾಳಕರ, ಶ್ಯಾಮ ಗೌಂಡವಾಡಕರ, ಪರಶುರಾಮ ಬಾಕ್ರೆ, ರಾಹುಲ್ ಅವನಾಚೆ ಬಂಧಿತರು. ಕಳೆದ ತಿಂಗಳು ನಗರದಲ್ಲಿ ಮಹೇಶ ಎಂಬುವವರನ್ನು ಹೊಡೆದು ಹತ್ಯೆ ಮಾಡಿ ಬಳಿಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮುಚ್ಚಿ ಹಾಕಲು ಯತ್ನಿಸುತ್ತಿರುವ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಟಿಳಕವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts