More

    ಕಸ ಎತ್ತಿದ ಮುನಿರತ್ನ, ರಸ್ತೆ ಗುಡಿಸಿದ ಗೋಪಾಲಯ್ಯ…!

    ಬೆಂಗಳೂರು: ಗಾಂಧಿ ಜಯಂತಿ ಮುನ್ನಾ ದಿನ ಎಲ್ಲರೂ ಒಂದುಗೂಡಿ ಸ್ವಚ್ಛತೆಗಾಗಿ ಶ್ರಮದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರೊಂದಿಗೆ ಬೀದಿಗಿಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.
    ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗುದ್ದಲಿ ಹಿಡಿದು ಕಸದ ರಾಶಿ ತೆರವುಗೊಳಿಸಲು ಪೌರಕಾರ್ಮಿಕರೊಂದಿಗೆ ಜತೆಯಾದರು. ಅದೇ ರೀತಿ ಶಾಸಕ ಗೋಪಾಲಯ್ಯ ಅವರು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದರು. ಅವರೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾದರು.
    ಅದೇ ರೀತಿ ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಹಾಗೂ ಮಹಾಲಕ್ಷ್ಮಿ ನಗರ ಗೆಳೆಯರ ಬಳಗ ಕ್ಷಯರೋಗ ಘಟಕದ ಸಹಯೋಗದಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮದಡಿಯಲ್ಲಿ, 175 ರೋಗಿಗಳಿಗೆ 13ನೇ ತಿಂಗಳಿನ ಪೌಷ್ಟಿಕ ಆಹಾರದ ಕಿಟ್ ಸಹ ವಿತರಿಸಿದರು.
    ಯಲಹಂಕ ಶಾಸಕ ವಿಶ್ವನಾಥ್ ಅವರು ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಪೌರಕಾರ್ಮಿಕರೊಡಗೂಡಿ ಬೀದಿ ಸ್ವಚ್ಛಗೊಳಿಸಿದರು.
    ಶಾಸಕ ಬಿ.ವೈ ವಿಜಯೇಂದ್ರ ಅವರು ಅಂಚೆಪೇಟೆ ವೃತ್ತದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಪ್ತಗಿರಿ ಗೌಡ, ಮುಖಂಡರಾದ ಗೋಪಾಲ್ ಭಾಗವಹಿಸಿದ್ದರು.
    ರಾಜ್ಯಾದ್ಯಂತ ಸ್ವಚ್ಛತಾ ಹೀ ಸೇವಾ ಚಟುವಟಿಕೆ ನಡೆದಿದ್ದು, ಬಿಜೆಪಿ ಸಂಸದರು, ಶಾಸಕರು, ಮುಖಂಡರು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts