ಮಂಗಳೂರು: ಮೂಡುಶೆಡ್ದೆ ಗ್ರಾಮ ಪಂಚಾಯಿತಿ ಹಾಗೂ ಮಣೇಲ್ ಶ್ರೀನಿವಾಸ್ ನಾಯಕ್ ಮೆಮೋರಿಯಲ್ ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಬುಧವಾರ ಪಡುಶೆಡ್ಡೆ ಯಿಂದ ಮೂಡುಶೆಡ್ದೆ ವರೆಗೆ ಬೃಹತ್ ಸ್ವಚ್ಛತಾ ಶ್ರಮದಾನ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಬಬಿತಾ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಕೆ., ಕಾಲೇಜಿನ ನಿರ್ದೇಶಕಿ ಡಾ.ಮೊಲಿ ಎಸ್. ಚೌಧರಿ, ಡಾ.ಶಿಲ್ಪಿ ಸಹಾ, ಸನತ್ ಭಂಡಾರ್ಕರ್, ಅರ್ಚನಾ ಕಾಮತ್, ಗಿರೀಶ್ ಪೈ, ಬಿಂದು, ತ್ಯಾಗರಾಜ್, ಯೋಗಿತಾ ಶೆಟ್ಟಿ ಉಪಸ್ಥಿತರಿದ್ದರು.