More

    ಘಟಪ್ರಭೆಯಲ್ಲಿ ಬಿಳಿ ನೊರೆ..!

    ವೆಂಕಟೇಶ ಗುಡೆಪ್ಪನವರ
    ಮುಧೋಳ: ಈ ಭಾಗದ ಜನರ ಜೀವನಾಡಿ ಘಟಪ್ರಭೆ ಇತ್ತೀಚೆಗೆ ಕಲುಷಿತಗೊಳ್ಳುತ್ತಿರುವ ಪರಿಣಾಮ ಬಿಳಿ ನೊರೆ ಹೆಚ್ಚಾಗುತ್ತಿದ್ದು, ನದಿ ತಡದ ಜನರ ಆತಂಕಕ್ಕೆ ಕಾರಣವಾಗಿದೆ.

    ಕೆಲವು ದಿನಗಳಿಂದ ಮುಧೋಳದ ಸಿದ್ಧೇಶ್ವರ ಬ್ಯಾರೇಜ್ ಬಳಿಯಲ್ಲಿ ಚರಂಡಿ ನೀರು ಘಟಪ್ರಭೆ ಸೇರುವ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದ್ದು, ಬಹಳಷ್ಟು ಜನರು, ಜಾನುವಾರುಗಳು ನದಿ ನೀರನ್ನೇ ಅವಲಂಭಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

    ನಗರದಲ್ಲಿ ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳಿಂದ ಹೊರ ಹೊಮ್ಮಿದ ಕಲ್ಮಶಗಳೂ, ಚರಂಡಿ ನೀರು ಸೇರಿ ನದಿಗೆ ಸೇರುತ್ತಿದೆ ಎಂಬ ಸಂಶಯ ವ್ಯಕ್ತವಾಗಿದ್ದು, ಸಂಬಂಧಿತ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ನದಿಗೆ ಕಲುಷಿತ ನೀರು ಸೇರದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

    ಮುಧೋಳ ನಗರದ ಘಟಪ್ರಭಾ ನದಿಯ ಸಿದ್ಧೇಶ್ವರ ಬ್ಯಾರೇಜ್ ಬಳಿ ಕಳೆದ ಕೆಲವು ತಿಂಗಳಿಂದ ಸಣ್ಣ ಪ್ರಮಾಣದಲ್ಲಿದ್ದ ನೊರೆ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ತೆಗೆದುಕೊಳ್ಳಬೇಕು.
    ರಮೇಶ ಎಚ್. ನಾಗರಿಕರು, ಮುಧೋಳ

    ನಾನು ಮುಧೋಳಕ್ಕೆ ಬರುವ ಮುಂಚೆಯಿಂದಲೂ ಈ ರೀತಿ ನೊರೆ ಹರಿದು ಬರುತ್ತಿದೆ. ಈಗ ನೊರೆ ಹೆಚ್ಚಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣವೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ, ಸ್ಥಗಿತಗೊಳಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
    ಸುನೀಲ ಪಾಟೀಲ ಪೌರಾಯುಕ್ತರು ಮುಧೋಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts