More

    ಮುದಗಲ್‌ನಲ್ಲಿ ನಿವೇಶನ ಮಂಜೂರು ಮಾಡಿ

    ಮುದಗಲ್: ಪಟ್ಟಣದ 11ನೇ ವಾರ್ಡ್‌ನಲ್ಲಿ ನಿವೇಶನ ಮಂಜೂರು ಮಾಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್‌ಗೆ ಪುರಸಭೆ ಕಚೇರಿಯಲ್ಲಿ ವಿಮುಕ್ತ ದೇವದಾಸಿಯರು ಮಂಗಳವಾರ ಮನವಿ ಸಲ್ಲಿಸಿದರು.

    ಕೆಲವು ವಿಮುಕ್ತ ದೇವದಾಸಿಯರಿಗೆ ಅಂಬೇಡ್ಕರ್ ಭವನದ ಬಳಿ ಸರ್ಕಾರದಿಂದ ನಿವೇಶನ ನೀಡಲಾಗಿದ್ದು, ಇನ್ನೂ ಹಲವರಿಗೆ ನಿವೇಶನ ನೀಡಿಲ್ಲ. ಅಂಬೇಡ್ಕರ್ ಭವನದ ಹತ್ತಿರ ನಿವೇಶನಕ್ಕೆ ಜಾಗದ ಕೊರತೆ ಇದ್ದು, 11ನೇ ವಾರ್ಡ್‌ನಲ್ಲಿ ಒಂದೇ ಕಡೆ ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

    ವಿಮುಕ್ತ ದೇವದಾಸಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೌಲಭ್ಯ ಕಲ್ಪಿಸಲಾಗುತ್ತದೆ. ಬೇಡಿಕೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಈ ಮೂಲಕ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಜಗದೀಶ ಗಂಗಣ್ಣನವರ್ ಭರವಸೆ ನೀಡಿದರು.

    ಪುರಸಭೆ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ವೆಂಕಟೇಶ ಹಿರೇಮನಿ, ಮೋಹನ ಭಂಡಾರಿ, ಬಸವರಾಜ ಹಿರೇಮನಿ, ಪರಶುರಾಮ, ದುರಗಮ್ಮ, ಚನ್ನಮ್ಮ, ಕರಿಯವ್ವ, ರೇಣುಕಾ, ಹುಸೇನಮ್ಮ, ಶಿವಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts