More

    ಗ್ರಾಮಸ್ಥರಿಂದಲೇ ಅಂಚೆ ಕಚೇರಿಗೆ ಕಟ್ಟಡ ನಿರ್ಮಾಣ

    ಮುದ್ದೇಬಿಹಾಳ: ಗ್ರಾಮಸ್ಥರೆಲ್ಲ ಸೇರಿ ಅಂಚೆ ಕಚೇರಿಗೆ ಸ್ಥಳಾವಕಾಶ, ಹಣ, ಕಟ್ಟಡದ ಸಾಮಗ್ರಿ ಸೇರಿ ಎಲ್ಲ ರೂಪದ ಸಹಕಾರ ನೀಡಿ ಶಾಶ್ವತ ಕಟ್ಟಡ ನಿರ್ಮಿಸಿಕೊಟ್ಟು ಮಾದರಿ ಕಾರ್ಯವನ್ನು ಮಾಡಿದ್ದಾರೆ ಎಂದು ವಿಜಯಪುರ ಅಂಚೆ ಉಪವಿಭಾಗದ ನಿರೀಕ್ಷಕ ಕೃಷ್ಣ ಸಂಕರಟ್ಟಿ ಹೇಳಿದರು.

    ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರಿಂದಲೇ ನಿರ್ಮಿಸಿದ ಅಂಚೆ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿ ಅವಶ್ಯಕತೆ ಮೊದಲಿಂದಲೂ ಇತ್ತು. ಸಾಂಪ್ರದಾಯಿಕ ಸೇವೆ, ಪತ್ರ ವಿತರಣೆ ಜತೆಗೆ ಈಗ ಸರ್ಕಾರದ ಮಾನವೀಯ ಸೇವೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ವೇತನಗಳನ್ನು ಅರ್ಹರಿಗೆ ಮುಟ್ಟಿಸುವ ಕೆಲಸವನ್ನು ಇಲಾಖೆ ಮಾಡಿಕೊಂಡು ಬಂದಿದೆ. ಜನತೆ ಅಂಚೆ ಇಲಾಖೆ ಮೇಲೆ ವಿಶ್ವಾಸ ಇಟ್ಟು ತಮ್ಮ ಉಳಿತಾಯದ ಹಣವನ್ನು ಇಲಾಖೆಯ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಬೇಕು ಎಂದು ಮನವಿ ಮಾಡಿದರು.

    ಅಂಚೆ ಕಚೇರಿಯ ಟ್ರೇಜರರ್ ಎಂ.ಎಸ್.ಗಡೇದ ಮಾತನಾಡಿ, ಕರೊನಾ ಸಂಕಷ್ಟದ ಸಮಯದಲ್ಲಿ ಅಂಚೆ ಇಲಾಖೆ ಎಲ್ಲ ಬಡವರ ಮನೆಬಾಗಿಲಿಗೆ ತೆರಳಿ ತನ್ನ ಮಾನವೀಯ ಸೇವೆ ನೀಡಿದೆ. ಕರೊನಾ ನಿಯಂತ್ರಿಸಲು ಬೇಕಾದ ಅಗತ್ಯ ವಸ್ತುಗಳನ್ನು ಸರ್ಕಾರ ಹಾಗೂ ಜನತೆ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದೆ. ಅಂಚೆ ಇಲಾಖೆ ಕಾಲಮಾನಕ್ಕೆ ತಕ್ಕಂತೆ ತನ್ನ ಸೇವೆಯಲ್ಲಿ ಸಹ ಬದಲಾವಣೆ ಮಾಡಿಕೊಂಡು ಜನತೆಗೆ ಅವಶ್ಯಕ ಸೇವೆ ನೀಡುವಲ್ಲಿ ಬದ್ಧವಾಗಿದೆ ಎಂದರು.

    ಗ್ರಾಮದ ಬಸವೇಶ್ವರ ಮಂಡಳಿ ವತಿಯಿಂದ ನಿರ್ಮಿಸಿದ ಅಂಚೆ ಕಚೇರಿಯಲ್ಲಿ ಬಸವೇಶ್ವರನ ಭಾವಚಿತ್ರಕ್ಕೆ ಶರಣಯ್ಯ ಹಿರೇಮಠ ಪೂಜೆ ನೆರವೇರಿಸಿದರು. ಗಣ್ಯರಾದ ಗೌಡಪ್ಪಗೌಡ ಪಾಟೀಲ, ಶಿವನಗೌಡ ಪಾಟೀಲ, ಸಿ.ಎಸ್.ದಳವಾಯಿ, ಶ್ರೀಶೈಲ ರೇವಡಿಹಾಳ, ಶರಣಪ್ಪ ಉಪ್ಪಲದಿನ್ನಿ, ಶಿವಪ್ಪ ದಳವಾಯಿ, ಲಕ್ಷ್ಮಣ ಸಂಕನಾಳ, ನೀಲಪ್ಪ ಕೊಡಬಾಗಿ, ಬಾಬುಲಾಲ ಚಪ್ಪರಬಂದ್, ಹಣಮಂತರಾಯ ಬ್ಯಾಕೋಡ, ಶಿವಾನಂದ ಸುರಳಿಕಲ್ಲ, ಸಂಗಯ್ಯ ಹಿರೇಮಠ, ಹಂಪಣ್ಣ ರೇವಡಿಹಾಳ, ಪರಸಪ್ಪ ದಳವಾಯಿ, ವಸಂತ ಬಡಿಗೇರ, ಯಲ್ಲಪ್ಪ ಈಳಗೇರ, ಗುರುಪಾದಪ್ಪಗೌಡ ಬಿರಾದಾರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts