More

    ಆರೋಪಿಗಳ ಬಂಧನಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ

    ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ದಲಿತ ವ್ಯಕ್ತಿ ಬಸವರಾಜ ಚಂದಪ್ಪ ಹರಿಜನ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಎಂ.ಡಿ. ಮಡ್ಡಿ ಹಾಗೂ ನಾಲ್ಕು ಜನ ಪೇದೆಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್‌ರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಹಲ್ಲೆಗೊಳಗಾದವರೆನ್ನಲಾದ ಬಸವರಾಜ ಚಂದಪ್ಪ ಹರಿಜನ ಹಾಗೂ ಸಂಘಟನೆಯ ಪದಾಧಿಕಾರಿಗಳು ತಹಸೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಪತ್ರ ನೀಡಿದರು.

    ನ್ಯಾಯ ಕೋರಿ ವಿಜಯಪುರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಿದ್ದು ಸದರಿ ಪ್ರಕರಣದಲ್ಲಿ ದಿನಾಂಕ 8-10-2020 ರಂದು ಆರೋಪಿಗಳ ಮೇಲೆ ಎ್ಐಆರ್ ದಾಖಲಾಗಿ ತಿಂಗಳು ಗತಿಸಿದರೂ ಎಸ್‌ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಆರೋಪಿಗಳ ಬಂಧನವಾಗಿಲ್ಲ ಎಂದು ದೂರಿದರು.

    ವಕೀಲ ಕೆ.ಬಿ. ದೊಡಮನಿ ಮಾತನಾಡಿ, ಆರೋಪಿಗಳು ಅಧಿಕಾರದಲ್ಲಿದ್ದು, ಸಾಕ್ಷಿ ನಾಶಪಡಿಸುವ ಸಾಧ್ಯತೆಗಳಿವೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

    ವಕೀಲರಾದ ಆರ್.ಎಸ್. ತುಪ್ಪದ, ಪಿ.ಬಿ. ಗೌಡರ, ಬಿ.ಪಿ. ಮ್ಯಾಗೇರಿ, ಶಿವು ಬಿಜ್ಜೂರ, ಯು.ಪಿ. ನಾಟೀಕಾರ, ಹಣಮಂತ್ರಾಯ ಹರಿಜನ, ಪರಶು ಚಲವಾದಿ, ಭೀಮಣ್ಣ ಚಲವಾದಿ, ಸಂಗಣ್ಣ ಚಲವಾದಿ, ಭೀಮು ಮೇಲಿನಮನಿ ಮತ್ತಿತರರು ಮನವಿಗೆ ಸಹಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts