ಮುದಗಲ್: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಂದ ಗುರುವಾರ ರಾಮತಾರಕ ಮಂತ್ರ ಜಪ ಕಾರ್ಯಕ್ರಮ ನಡೆಯಿತು.
ತಾರನಹಾರ ಎಂದೆ ಕರೆಯಲ್ಪಡುವ ರಾಮತಾರಕ ಜಪದೊಂದಿಗೆ ಐದು ದಿನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಮಾದರಿಯಲ್ಲಿ ದೀಪ ಬೆಳಗಿಸಿ ರಾಮತಾರಕ ಜಪ ಮಾಡಲಾಗುವದು. ಪಟ್ಟಣದ ಪ್ರಾಣ ದೇವರ ದೇವಸ್ಥಾನದಲ್ಲೂ ಐದು ದಿನ ರಾಮತಾರಕ ಜಪ ಕೈಗೊಳ್ಳಲಾಗುತ್ತಿದೆ ಎಂದು ದೇವಸ್ಥಾನದ ಮುಖ್ಯ ಟ್ರಸ್ಟಿ ನಾರಾಯಣ ರಾವ್ ದೇಶಪಾಂಡೆ ತಿಳಿಸಿದರು.
ಶುಭಾಂಗಿ ಎನ್.ದೇಶಪಾಂಡೆ ಜಪ ಕಾರ್ಯಕ್ರಮ ನಿರ್ವಹಿಸಿದರು.