More

    ತುಂತುರು ಮಳೆಯಿಂದ ಜನಜೀವನ ಅಸ್ತವ್ಯಸ್ತ

    ಮುದಗಲ್: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ತುಂತುರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

    ಇದನ್ನೂ ಓದಿರಿ:ಸೆ.೧ ರಿಂದ ಮುಂಗಾರು ಬೆಳೆ ಸಮೀಕ್ಷೆ ಆರಂಭ; ಡಾ.ಬಿ.ಸಿ.ಸತೀಶ

    ಮಳೆಯಿಂದ ಮುಂಗಾರು ಬೆಳೆಗಳಿಗೆ ಅನುಕೂಲವಾಗಿದೆ. ತೊಗರಿ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಆದರೆ, ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರದಂತಾಗಿದೆ. ಮಳೆಯಿಂದಾಗಿ ಮೊಹರಂ ಆಚರಣಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಮೊಹರಂ ಕೊನೆಯ ದಿನವಾದ ಜು.29 ರಂದು ಲಕ್ಷಾಂತರ ಜನರು ಸೇರುವುದರಿಂದ ತುಂತುರು ಮಳೆ ಮುಂದುವರಿದರೆ ಹಬ್ಬದ ಸಂಭ್ರಮಕ್ಕೆ ತೊಡಕು ಆಗುವ ಸಾಧ್ಯತೆಗಳಿವೆ.

    ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ


    ರಾಯಚೂರು: ಜಿಲ್ಲೆಯಲ್ಲಿ ಮೂರ‌್ನಾಲ್ಕು ದಿನಗಳಿಂದ ಸುರಿದ ಮಳೆ ಭಾನುವಾರ ವಿರಾಮ ನೀಡಿದ್ದು, ಮೋಡ ಕವಿದ ವಾತಾವರಣ ಇತ್ತು. ಶನಿವಾರದಿಂದ ಭಾನುವಾರ ಬೆಳಗಿನ ಜಾವದವರೆಗೆ ಜಿಲ್ಲೆಯಲ್ಲಿ ಸರಾಸರಿ 2.5 ಮಿ.ಮೀ. ಮಳೆಯಾಗಿದೆ. ರಾಯಚೂರು ತಾಲೂಕಿನಲ್ಲಿ 1 ಮಿ.ಮೀ., ದೇವದುರ್ಗ 0.3, ಲಿಂಗಸುಗೂರು 2.4, ಮಾನ್ವಿ 4.3, ಸಿಂಧನೂರು 1.9, ಮಸ್ಕಿ 4.3, ಸಿರವಾರ ತಾಲೂಕಿನಲ್ಲಿ 3.2 ಮಿ.ಮೀ. ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts