ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುತ್ತೂರು ಶ್ರೀಗಳ ಎದುರೇ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.
ತಾವು ಹೇಳಿದ ಒಬ್ಬರಿಗೂ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡದಕ್ಕೆ ಗರಂ ಆಗಿರುವ ಶ್ರೀನಿವಾಸ್ ಪ್ರಸಾದ್, ಅಧಿಕಾರಕ್ಕೆ ಬರುವಾಗ ನಾವು ಬೇಕಿತ್ತು. ಈಗ ನಾವು ಹೇಳಿದ ಒಬ್ಬರಿಗೂ ಅಧ್ಯಕ್ಷ ಸ್ಥಾನ ನೀಡಲ್ಲ ಅಂದರೆ ಅದರ ಏನು ಅರ್ಥ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಡು ಹಂದಿ ಬೇಟೆಗೆ ಹೋದವನ ದೇಹವೇ ಛಿದ್ರಛಿದ್ರ ಆಯ್ತು ! ವರಾಹನ ಶಾಪ ತಟ್ಟೀತೆ?
ಇದೇ ವೇಳೆ ಶ್ರೀನಿವಾಸ್ ಪ್ರಸಾದ್ರನ್ನು ಸಮಾಧಾನ ಪಡಿಸಿದ್ದ ಸಿಎಂ, ಇನ್ನೂ ಮೂರು ದಿನದಲ್ಲಿ ಎಲ್ಲವನ್ನೂ ಸರಿ ಮಾಡುತ್ತೇನೆ. ಸಿಟ್ಟು ಮಾಡಿಕೊಳ್ಳಬೇಡಿ ಎಂದು ಇನ್ನೊಮ್ಮೆ ಶ್ರೀನಿವಾಸಪ್ರಸಾದ್ ಅವರಿಂದ ಬೆಂಬಲಿಗರ ಪಟ್ಟಿ ಪಡೆದುಕೊಂಡಿದ್ದಾರೆ. ಈ ಎಲ್ಲ ಪ್ರಸಂಗ ಸುತ್ತೂರು ಮಠದ ಒಳಾಂಗಣದಲ್ಲಿ ನಡೆದಿದೆ.
ಇದಕ್ಕೂ ಮುನ್ನ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ್ದ ಶ್ರೀನಿವಾಸ ಪ್ರಸಾದ್, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದ್ರಲ್ಲ, ಇನ್ನೇನು ಆ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿ ಇದ್ದಾರೆ. ನೋಡ್ಕೋತಿವಿ ಬಿಡಿ ಎಂದರು. (ದಿಗ್ವಿಜಯ ನ್ಯೂಸ್)