ಬೆಂಗಳೂರು: ಪ್ರಿಯಕರನ ಜತೆ ಸೇರಿ ತಾಯಿ ಹತ್ಯೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಕೆಆರ್ಪುರ ಪೊಲೀಸರು ಇಬ್ಬರನ್ನು ಪೋರ್ಟ್ ಬ್ಲೇರ್ನಲ್ಲಿ ಬಂಧಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬರ್ನ ಬ್ಲೇರ್ನಲ್ಲಿ ಕೆಆರ್ ಪುರ ಪೊಲೀಸರು ಆರೋಪಿಗಳಾದ ಅಮೃತಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್ ರಾವ್ ಎಂಬುವವರನ್ನು ಬಂಧಿಸಿದ್ದಾರೆ.
ಫೆ.2ರಂದು ಅಮೃತಾ ತನ್ನ ತಾಯಿ ನಿರ್ಮಲಾ (54)ರನ್ನು ಕೊಲೆ ಮಾಡಿದ್ದರು. ಅಲ್ಲದೆ ಸಹೋದರ ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪ್ರಿಯಕರನೊಂದಿಗೆ ಬೈಕ್ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಅಂಡಮಾನ್ಗೆ ಪರಾರಿಯಾಗಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಪೋರ್ಟ್ ಬ್ಲೇರ್ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಮೃತಾ ಇಂಜಿನಿಯರಿಂಗ್ ಪದವೀಧರೆ. ಈಕೆ 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಳು. ಅಲ್ಲದೆ ಶ್ರೀಧರ್ ರಾವ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇವರ ವಿವಾಹಕ್ಕೆ ತಾಯಿ ನಿರ್ಮಲಾ ಅಡ್ಡ ಬಂದ ಪರಿಣಾಮ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. (ದಿಗ್ವಿಜಯ ನ್ಯೂಸ್)