ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮದ (ಬಿಎಸ್ಎನ್ಎಲ್) 88 ಸಾವಿರಕ್ಕೂ ಅಧಿಕ ಮನೆಗೆ ಕಳುಹಿಸ್ತಾರೆ; ಕಂಪನಿಯನ್ನು ಖಾಸಗೀಕರಣ ಮಾಡ್ತಾರೆ…!
ಇದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ. ಬಿಎಸ್ಎನ್ಎಲ್ ಸಿಬ್ಬಂದಿಯನ್ನು ದೇಶದ್ರೋಹಿಗಳು ಎಂದೇ ಸಂಬೋಧಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಸಂವಾದದ (ವರ್ಚುಯಲ್) ಮೂಲಕ ಮಾತನಾಡಿರುವ ಅನಂತಕುಮಾರ್ ಹೆಗಡೆ ಈ ಹೇಳಿಕೆ ನೀಡಿದ್ದಾರೆಂದು ಹೇಳಲಾಗಿದೆ.
ಇದನ್ನೂ ಓದಿ; ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್ ತೀರ್ಪು
ಸಂಕಷ್ಟದಲ್ಲಿರುವ ಸಂಸ್ಥೆಯನ್ನು ಉಳಿಸಲು ಸಿಬ್ಬಂದಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೌಕರರು ಸೋಮಾರಿ, ಅಸಮರ್ಥರಾಗಿರುವುದರಿಂದಲೇ ಸರ್ಕಾರಿ ಸಂಸ್ಥೆ ಅಧೋಗತಿಗೆ ಇಳಿದಿದೆ. ಹೀಗಾಗಿ ಅವರನ್ನು ದೇಶದ್ರೋಹಿಗಳೆಂದೇ ಕರೆಯುತ್ತೇನೆ ಹೇಳಿರುವುದಾಗಿ ವರದಿಯಾಗಿದೆ.
ಬಿಎಸ್ಎನ್ಎಲ್ ದೇಶದ್ರೋಹಿಗಳಿಂದಲೇ ತುಂಬಿ ಹೋಗಿದೆ. ಸರ್ಕಾರ ಅವರಿಗೆ ಹಣ ನೀಡಿದೆ, ಮೂಲಸೌಕರ್ಯ ಒದಗಿಸಿದೆ. ಜನರಿಗೆ ಸೇವೆ ಬೇಕಾಗಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಪ್ರಧಾನಿ ಡಿಜಿಟಲ್ ಇಂಡಿಯಾದ ಕನಸು ಹೊಂದಿದ್ದಾರೆ. ಇದಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದಾರೆ. ಹೀಗಿದ್ದರೂ ಇವರು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ; ರಷ್ಯಾದಲ್ಲಿ ನೋಂದಣಿಯಾಯ್ತು ವಿಶ್ವದ ಪ್ರಪ್ರಥಮ ಕರೊನಾ ಲಸಿಕೆ; ಅಧ್ಯಕ್ಷ ಪುಟಿನ್ ಮಗಳಿಗೆ ಚುಚ್ಚುಮದ್ದು ಪ್ರಯೋಗ
ಸಂಸ್ಥೆಯನ್ನು ಸರಿಪಡಿಸಲು ಇರುವ ಒಂದೇ ಮಾರ್ಗವೆಂದರೆ ಖಾಸಗಿಯವರಿಗೆ ವಹಿಸುವುದು ಹಾಗೂ 88 ಸಾವಿರ ನೌಕರರನ್ನು ವಜಾಗೊಳಿಸುವುದು. ಸರ್ಕಾರ ಹೀಗೆ ಮಾಡಲಿದೆ ಎಂದು ಅನಂತಕುಮಾರ್ ಹೇಳಿದ್ದಾರೆ.
BSNL employees are traitors who weren't willing to work to develop a well-known firm. More than 88000 employees will be fired, as govt will privatise BSNL: BJP MP Anantkumar Hegde on BSNL
He was speaking at an event held on Aug 10 in Kumta, Uttara Kannada district, #Karnataka pic.twitter.com/BfxbK25EQX
— ANI (@ANI) August 11, 2020
ರಷ್ಯಾ ಕರೊನಾ ಲಸಿಕೆ ಬಗ್ಗೆ ಜಗತ್ತಿಗೆ ಸಂಶಯ; 9 ತಿಂಗಳಲ್ಲಿ ಚುಚ್ಚುಮದ್ದು ತಯಾರಾಗಿದ್ದೇಗೆ?