More

    ಹಣದ ವ್ಯವಹಾರಕ್ಕೆ ಸಂಬಂಧಿಸಿ ಬೆದರಿಕೆ: ಡಿಕೆಶಿ ಆಪ್ತನ ವಿರುದ್ಧ ಬಳ್ಳಾರಿಯಲ್ಲಿ ಕೇಸ್

    ಬಳ್ಳಾರಿ: ಜೀವ ಬೆದರಿಕೆ ಒಡ್ಡಿದ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಎನ್ನಲಾದ ನಗರದ ಕಾಂಗ್ರೆಸ್ ಮುಖಂಡ ಜೆ.ಎಚ್.ಆಂಜನೇಯಲು ಮತ್ತು ನಾಲ್ವರ ವಿರುದ್ಧ ಇಲ್ಲಿಯ ಕೌಲ್ ಬಜಾರ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಾಗಿದೆ.

    ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿ ಪೂರ್ಣಚಂದ್ರರಾವ್ ನೀಡಿದ ದೂರಿನ ಆಧಾರದ ಮೇಲೆ ಆಂಜನೇಯಲು ಸೇರಿದಂತೆ ಅವರ ಮಕ್ಕಳಾದ ಅಖಿಲ್, ಪವನ್, ಶಿವು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡ್ಯಾನಿಯಲ್ ಎಂಬ ನಿಮ್ಮ ತಮ್ಮ, ನನ್ನೊಂದಿಗೆ ಹಣದ ವ್ಯವಹಾರ ಮಾಡಿದ್ದಾರೆ. ಆತ ಎಲ್ಲಿದ್ದಾನೆ? ಇಲ್ಲವೇ ಹಣ ನೀನೇ ಕೊಡು. ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ಸಹಿತ ಉಳಿಸುವುದಿಲ್ಲ. ಜತೆಗೆ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆಂಜನೇಯಲು ಹಾಗೂ ಅವರ ಕಡೆಯವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಪೂರ್ಣಚಂದ್ರರಾವ್ ವಿವರಿಸಿದ್ದಾರೆ. ಜತೆಗೆ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ ಎಂದೂ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಜೆ.ಎಚ್.ಆಂಜನೇಯಲು, ಡ್ಯಾನಿಯಲ್ ಎಂಬಾತನೊಂದಿಗೆ ವ್ಯವಹಾರ ಮಾಡಿದ್ದೆ. 40 ರಿಂದ 60 ಲಕ್ಷರೂ.ವರೆಗೆ ಬೇರೆಯವರ ಬಳಿ ಸಾಲ ಕೊಡಿಸಿದ್ದೇನೆ. ಹಣ ಮರು ಪಾವತಿ ಮಾಡಿ ಎಂದಿದ್ದಕ್ಕೆ ನಮ್ಮ ಕುಟುಂಬದ ವಿರುದ್ಧ ಪೂರ್ಣಚಂದ್ರರಾವ್ ಪ್ರಕರಣ ದಾಖಲಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts